Slide
Slide
Slide
previous arrow
next arrow

ಜೋಯಿಡಾಕ್ಕೆ ಆಗಮಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಬೈಕ್ ಜಾಥಾ

300x250 AD

ಜೋಯಿಡಾ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಆಶ್ರಯದಲ್ಲಿ ಫೆ:19 ರಿಂದ ಹಮ್ಮಿಕೊಂಡಿರುವ ರಾಜ್ಯಾದ್ಯಂತ 3000 ಕಿಲೋಮೀಟರ್ ಬೈಕ್ ಜಾಥಾವು ಶುಕ್ರವಾರ ಜೋಯಿಡಾ ತಾಲೂಕಿಗೆ ಆಗಮಿಸಿತು.

ಜೋಯಿಡಾ ತಾಲ್ಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದ ಹತ್ತಿರ ಶುಕ್ರವಾರ ಮಧ್ಯಾಹ್ನ 12:30 ಗಂಟೆಗೆ ಸಭೆಯನ್ನು ಸೇರಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಅಧ್ಯಕ್ಷ ನೀಲಕಂಠ, ದೇಶದಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಇಲ್ಲದಾಗಿದೆ. ಹೊಸ ಹುದ್ದೆಗಳ ನಿರ್ಮಾಣಕ್ಕೆ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಪರಿಣಾಮವಾಗಿ ರಾಜ್ಯದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ. ಸಮೃದ್ಧ ಹಾಗೂ ಸದೃಢ ಕರ್ನಾಟಕವನ್ನು ಕಟ್ಟುವ ಸಲುವಾಗಿ ಕೆ.ಆರ್.ಎಸ್ ಪಕ್ಷದ ಉದಯವಾಗಿದೆ. ಈ ಪಕ್ಷದ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD

Share This
300x250 AD
300x250 AD
300x250 AD
Back to top