Slide
Slide
Slide
previous arrow
next arrow

ಮೂರು ಎಕರೆಗಿಂತ ಕಡಿಮೆ ಇರುವವರನ್ನು ಒಕ್ಕಲೆಬ್ಬಿಸುವುದಿಲ್ಲ: ಈಶ್ವರ ಕಂಡ್ರೆ

300x250 AD

ಶಿರಸಿ: ಅರಣ್ಯವಾಸಿಗಳು ಅರಣ್ಯ ಒತ್ತುವರಿ ಮಾಡಿರುವ ಕುಟುಂಬಕ್ಕೆ ಸಂಬಂಧಿಸಿದ, ಮೂರು ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಕಂಡ್ರೆ ತಿಳಿಸಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ, ಬೆಂಗಳೂರಿನಲ್ಲಿನ ವಿಕಾಸ ಸೌಧದ ಕಚೇರಿಯಲ್ಲಿ ಹೋರಾಟಗಾರರ ವೇದಿಕೆ ನಿಯೋಗವು ಭೇಟ್ಟಿಕೊಟ್ಟಂತ ಸಂದರ್ಭದಲ್ಲಿ ಮೇಲಿನಂತೆ ಅವರು ಹೇಳಿದರು.

 ಪ್ರತಿ ಕುಟುಂಬಕ್ಕೂ, ಕುಟುಂಬ ನಿರ್ವಹಣೆಗೆ ಅರಣ್ಯ ಸಾಗುವಳಿ ಮತ್ತು ಪಟ್ಟಾ ಜಮೀನು ಸೇರಿ ಮೂರು ಎಕರೆ ಅವಶ್ಯವೆಂದು ಸರಕಾರ ಮನಗೊಂಡಿರುವ ಹಿನ್ನೆಲೆಯಲ್ಲಿ ಮೇಲಿನಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

 ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ, ಅರ್ಜಿ ವಿಲೇವಾರಿ ಆಗುವವರೆಗೂ ಅರಣ್ಯವಾಸಿಗಳಿಗೆ ಬದ್ಧತೆ ನೀಡಲು ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

300x250 AD

 ಹೋರಾಟ ಸಮಿತಿಯ  ಪ್ರಧಾನ ಸಂಚಾಲಕರಾದ ಜಿ.ಎಮ್. ಶೆಟ್ಟಿ ಅಚಿವೆ ಮತ್ತು ರಾಮ ಮೊಗೇರ್ ಅಳ್ವೆಕೋಡಿ ನಿಯೋಗದಲ್ಲಿದ್ದು, ಚರ್ಚೆಯಲ್ಲಿ ಭಾಗವಹಿಸಿದ್ದರು.

೧೯೭೮ ರ ಪೂರ್ವ ಅತಿಕ್ರಮಣ:
 ಜುಲೈ ೧೯೭೮ ರ ಪೂರ್ವದಲ್ಲಿ ಅತಿಕ್ರಮಿಸಿರುವ ೧೪,೮೪೮.೮೩ ಹೇಕ್ಟರ್ ಪ್ರದೇಶದ, ೧೯,೩೪೮ ಒತ್ತುವರಿ ಕುಟುಂಬಗಳಿಗೆ ಅರಣ್ಯ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕೇಂದ್ರ ಸರಕಾರ ಪರವಾನಿಗೆ ನೀಡಿದೆ. ಅರಣ್ಯವಾಸಿಗಳ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಸರಕಾರ ಬದ್ಧವಾಗಿದೆ ಎಂದು ಅವರು ನಿಯೋಗಕ್ಕೆ ತಿಳಿಸಿದರು.

Share This
300x250 AD
300x250 AD
300x250 AD
Back to top