Slide
Slide
Slide
previous arrow
next arrow

ಸಮರ್ಪಕ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಮನವಿ ಸಲ್ಲಿಕೆ

300x250 AD

ಬನವಾಸಿ:  ಸಮರ್ಪಕವಾಗಿ ವಿದ್ಯುತ್ ಸರಬರಾಜು ಕಲ್ಪಿಸುವಂತೆ ಆಗ್ರಹಿಸಿ ಸಮೀಪದ ತಿಗಣಿ ಗ್ರಾಮಸ್ಥರು ಶಾಸಕ ಶಿವರಾಮ ಹೆಬ್ಬಾರ್ ಹಾಗೂ   ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ  ಅವರಿಗೆ  ಬುಧವಾರ ಮನವಿ ಸಲ್ಲಿಸಿದರು.

ಬನವಾಸಿಯಿಂದ ಸರಬರಾಜುಗೊಳ್ಳುವ ವಿದ್ಯುತ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ದಿನದಲ್ಲಿ 5-6 ಬಾರಿ ಕರೆಂಟ್ ಹೋಗಿ ಬರುವ ಜೊತೆಗೆ  ವೋಲ್ಟೇಜ್ ಸಮಸ್ಯೆ ಎದುರಾಗಿದ್ದು ಇದರಿಂದಾಗಿ  ಗ್ರಾಮಸ್ಥರಿಗೆ  ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಅಲ್ಲದೇ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು  ಕಷ್ಟಕರವಾಗಿದೆ. ಶೀಘ್ರವಾಗಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದರು.

300x250 AD

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ತಹಶೀಲ್ದಾರ ಶ್ರೀಧರ ಮುಂದಲಮನಿ, ದ್ಯಾಮಣ್ಣ ದೊಡ್ಮನಿ, ಶಿವಕುಮಾರ ದೇಸಾಯಿ ಗೌಡ,  ಗ್ರಾಪಂ ಸದಸ್ಯ ಪ್ರಭಾಕರ ಗೌಡ, ಬಸವರಾಜ ನಾಯ್ಕ್, ಸೇರಿದಂತೆ  ತಿಗಣಿ ಗ್ರಾಮಸ್ಥರು ಇದ್ದರು.

Share This
300x250 AD
300x250 AD
300x250 AD
Back to top