Slide
Slide
Slide
previous arrow
next arrow

ಪುರಸಭೆ ಜವಾನ ಗಣಪತಿ ಗಿರಿ ನಿವೃತ್ತಿ: ಬೀಳ್ಕೊಡುಗೆ

300x250 AD

ಹಳಿಯಾಳ : ಪಟ್ಟಣದ ಪುರಸಭೆಯಲ್ಲಿ ಕಳೆದ ಹಲವು ವರ್ಷಗಳಿಂದ ಜವಾನರಾಗಿ ಅನುಪಮ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಗಣಪತಿ ಗುಂಡು ಗಿರಿಯವರಿಗೆ ಪುರಸಭೆಯಲ್ಲಿ ಅಭಿಮಾನಪೂರ್ವಕ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಗಣಪತಿ ಗುಂಡು ಗಿರಿ‌‌ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ್ ಅವರು ‘ಗಣಪತಿಯವರು ತಮಗೆ ವಹಿಸಿದ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ ಪ್ರಾಮಾಣಿಕವಾಗಿ‌ ನಿಭಾಯಿಸುವ ಮೂಲಕ ಎಲ್ಲರ ಪ್ರೀತಿ ವಾತ್ಸಲ್ಯಕ್ಕೆ ಪಾತ್ರರಾಗಿದ್ದಾರೆ. ಗಣಪತಿಯವರ ಸೇವಾ ಮನೋಭಾವನೆ, ಸಮಯ ಪ್ರಜ್ಞೆ ಮತ್ತು ಅವರ ವ್ಯಕ್ತಿತ್ವ ಅನುಕರಣೆಯ ಮತ್ತು ಅಭಿನಂದನೀಯ’ ಎಂದು ಹೇಳಿ ನಿವೃತ್ತ ಜೀವನವು ಸುಖಕರವಾಗಿರಲೆಂದು ಶುಭವನ್ನು ಹಾರೈಸಿದರು.

ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಗಣಪತಿ ಗುಂಡು ಗಿರಿ ಅವರು ನನಗೆ ಇಷ್ಟು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಲು ಸಂಪೂರ್ಣ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

300x250 AD

ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top