Slide
Slide
Slide
previous arrow
next arrow

ಜಿ.ಎಸ್.ಅಜ್ಜೀಬಳ‌ ಪುರಸ್ಕಾರಕ್ಕೆ ಪತ್ರಕರ್ತ ಸಂದೇಶ್ ದೇಸಾಯಿ ಆಯ್ಕೆ

300x250 AD

ಜೋಯಿಡಾ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ‌ ಕೊಡಮಾಡುವ ಪ್ರತಿಷ್ಟಿತ ಜಿ.ಎಸ್.ಅಜ್ಜೀಬಳ ಪ್ರಶಸ್ತಿಗೆ ಜೋಯಿಡಾ ತಾಲೂಕಿನ ಪತ್ರಕರ್ತ ಸಂದೇಶ್ ದೇಸಾಯಿ ಆಯ್ಕೆಯಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪತ್ರಕರ್ತರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಂದೇಶ್ ದೇಸಾಯಿ, ತಮ್ಮ ಹರಿತವಾದ ಬರವಣಿಗೆಯ‌ ಮೂಲಕ ಗಮನ ಸೆಳೆದವರು. ತನ್ನ ಪ್ರಖರವಾದ ವರದಿಗಳ‌ ಮೂಲಕ ಆಡಳಿತ ಯಂತ್ರಕ್ಕೆ ಚುರುಕು‌ ಮಟ್ಟಿಸಿದ ಹೆಗ್ಗಳಿಕೆಯನ್ನು ಹೊಂದಿರುವ ಸಂದೇಶ್ ದೇಸಾಯಿ ಅತ್ಯುತ್ತಮ‌ ಕ್ರೀಡಾಪಟುವಾಗಿಯೂ ಮಿಂಚಿದವರು.

300x250 AD

ಪ್ರಗತಿಪರ ಕೃಷಿಕರಾಗಿರುವ ಸಂದೇಶ್ ದೇಸಾಯಿ ಜೋಯಿಡಾ ತಾಲೂಕಿನ‌ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಾಗೂ ನಂದಿಗದ್ದಾ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದೇ ಜನವರಿ : 28 ರಂದು ಶಿರಸಿಯಲ್ಲಿ‌ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ‌ ಮಂಡಳಿಯ ಸುವರ್ಣ‌ ಮಹೋತ್ಸವದ ಭವ್ಯ ಸಮಾರಂಭದಲ್ಲಿ ಸಂದೇಶ್ ದೇಸಾಯಿಯವರಿಗೆ ಈ ಪುರಸ್ಕಾರವನ್ನು ಪ್ರದಾನ‌ ಮಾಡಲಾಗುತ್ತಿದೆ.

Share This
300x250 AD
300x250 AD
300x250 AD
Back to top