Slide
Slide
Slide
previous arrow
next arrow

ಜ.22ಕ್ಕೆ ಇಟಗಿಯಲ್ಲಿ ‘ಶ್ರೀರಾಮತಾರಕ ಜಪಯಜ್ಞ’

300x250 AD

ಸಿದ್ದಾಪುರ: ತಾಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ, ಶ್ರೀ ಅಮ್ಮನವರ ಮತ್ತು ಶ್ರೀ ವಿಠ್ಠಲ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನ ಅಂಗವಾಗಿ ಜ.22ರಂದು ಶ್ರೀ ರಾಮತಾರಕ ಜಪ ಯಜ್ಞ, ಭಜನೆ ಮತ್ತು ದೀಪೋತ್ಸವ ಜರುಗಲಿದೆ. ಬೆಳಗ್ಗೆ ಶ್ರೀ ರಾಮತಾರಕ ಜಪಯಜ್ಞ,ಮಹಾಮಂಗಳಾರತಿ, ಪ್ರಸಾದ ವಿತರಣೆ,ಪ್ರಸಾದ ಭೋಜನ. ಸಂಜೆ 7ರಿಂದ ದೀಪೋತ್ಸವ, ಭಜನೆ, ಮಹಾಮಂಗಳಾರತಿ, ಧರ್ಮಸಭೆ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಕಾನಸೂರಿನ ರುದ್ರಾಂಜನೇಯ ದೇವಸ್ಥಾನದಲ್ಲೂ ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನ ಅಂಗವಾಗಿ ಜ.22ರಂದು ಬೆಳಗ್ಗೆ ರಾಮತಾರಕ ಜಪ ಯಜ್ಞ, ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ಆಯ್ದ ಕಲಾವಿದರಿಂದ ಲವ-ಕುಶ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top