Slide
Slide
Slide
previous arrow
next arrow

ಪರ್ತಗಾಳಿ ಶ್ರೀಗಳಿಂದ ಬೋರ್‌ವೆಲ್ ಉದ್ಘಾಟನೆ

300x250 AD

ದಾಂಡೇಲಿ: ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿ.ಡಿ.ಹೆಗಡೆ ಹಾಗೂ ಅವರ ಪುತ್ರ ಮಾಜಿ ಶಾಸಕರಾದ ಸುನೀಲ್ ಹೆಗಡೆ ಕೊಡುಗೆಯಾಗಿ ನಿರ್ಮಿಸಿ‌ಕೊಟ್ಟ‌ ನೂತನ ಬೋರ್ವೆಲಿಗೆ ಶನಿವಾರ ಗೋಕರ್ಣ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿಯವರು ವಿಶೇಷ ಪೂಜೆಯನ್ನು ಸಲ್ಲಿಸಿ ಉದ್ಘಾಟಿಸಿದರು.

ಅನಂತರ ಪೂಜ್ಯ ಸ್ವಾಮೀಜಿಯವರು ವಿ.ಡಿ.ಹೆಗಡೆ ಮತ್ತು ಸುನೀಲ್ ಹೆಗಡೆಯವರನ್ನು ಕ್ಷೇತ್ರದ ಪರವಾಗಿ ಸನ್ಮಾನಿಸಿದರು.

300x250 AD

ಈ ಸಂದರ್ಭದಲ್ಲಿ ಸು‌ನೀಲ್ ಹೆಗಡೆ ಧರ್ಮಪತ್ನಿ ಸುವರ್ಣಾ ಹೆಗಡೆ, ಸಹೋದರ ವಿಷ್ಣು ಹೆಗಡೆ, ಮಕ್ಕಳಾದ ನಿರೀಕ್ಷಾ ಮತ್ತು‌ ನಯನ್, ಅಳಿಯ ಗೌತಮ್ ನಾಯಕ್, ಬಿಜೆಪಿ ಮುಖಂಡರಾದ ಮಂಗೇಶ್ ದೇಶಪಾಂಡೆ, ರೊಶನ್‌ ನೇತ್ರಾವಳಿ, ಜಿಎಸ್‌ಬಿ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಹೆಗಡೆ, ಪ್ರಮುಖರಾದ ಸಚಿನ್ ಕಾಮತ್, ನಿತಿನ್ ದೇಶಪಾಂಡೆ, ಸುರೇಶ ಕಾಮತ್, ಬಾಬಾಣ್ಣ ಶ್ರೀವತ್ಸ, ನವೀನ್ ಕಾಮತ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top