Slide
Slide
Slide
previous arrow
next arrow

ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ ಟಿ.ಎಸ್.ಬಾಲಮಣಿ ಆಯ್ಕೆ

300x250 AD

ದಾಂಡೇಲಿ: 107 ವರ್ಷಗಳ ಇತಿಹಾಸವಿರುವ ಶಿರಸಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ ತಾಲ್ಲೂಕಿನ ಉದ್ಯಮಿ ಹಾಗೂ ಸಮಾಜ ಸೇವಕರಾದ ಟಿ.ಎಸ್.ಬಾಲಮಣಿ ಸತತ 4 ನೇ ಬಾರಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಶಿರಸಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 4ನೇ ಬಾರಿ ಸ್ಪರ್ಧಿಸಿದ್ದ ಟಿ.ಎಸ್. ಬಾಲಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಶಿರಸಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧಿಕೃತವಾಗಿ ಸೋಮವಾರ ಘೋಷಣೆ ಮಾಡಿದೆ.

300x250 AD

ಮೊಟ್ಟ ಮೊದಲು ಚುನಾವಣೆಯ ಮೂಲಕ ಗೆಲುವು ಸಾಧಿಸಿದ್ದ ಟಿ.ಎಸ್. ಬಾಲಮಣಿಯವರು ಆನಂತರ ಮೂರು ಬಾರಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 4ನೇ ಬಾರಿ ಆಯ್ಕೆಯಾದ ಟಿ.ಎಸ್. ಬಾಲಮಣಿಯವರನ್ನು ತಾಲೂಕಿನ ಗಣ್ಯರನೇಕರು ಅಭಿನಂದಿಸಿದ್ದಾರೆ. ಟಿ.ಎಸ್.ಬಾಲಮಣಿಯವರು ದಾಂಡೇಲಿ‌ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ, ದಾಂಡೇಲಿ ಟ್ರಾನ್ಸಪೋರ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top