Slide
Slide
Slide
previous arrow
next arrow

ಗೋಕರ್ಣ-ಹಿಲ್ಲೂರ್-ದೇವನಳ್ಳಿ ಮೂಲಕ ಬೆಂಗಳೂರಿಗೆ ಬಸ್ ಸಂಚಾರ ಪ್ರಾರಂಭ

300x250 AD

ಶಿರಸಿ: ಗೋಕರ್ಣ-ಹಿಲ್ಲೂರ-ಚೆನ್ನಗಾರ ವಡ್ಡಿ-ದೇವನಳ್ಳಿ ಮಾರ್ಗದಿಂದ ಶ್ರೀಕುಮಾರ ಟ್ರಾವೆಲ್ಸ್‌ನ ಬಸ್ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಿದೆ

ದೇವನಳ್ಳಿಯಲ್ಲಿ ಟ್ರಾವೆಲ್ಸ್‌ನ ಮೂಲಕ ಶ್ರೀ ವೆಂಕಟ್ರಮಣ ಹೆಗಡೆಯವರನ್ನು ಗೌರವಿಸಿ, ಅಭಿನಂದಿಸಿ ಮಾತನಾಡಿದ ಟಿ.ಎಸ್.ಎಸ್.ನ ಅಧ್ಯಕ್ಷ ಹಾಗೂ ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ, ವೆಂಕಟ್ರಮಣ ಹೆಗಡೆಯವರು ನಮ್ಮ ಭಾಗದ ಪ್ರಯಾಣಿಕರಿಗೆ ಉತ್ತಮ ವ್ಯವಸ್ಥೆಯನ್ನು ಮಾಡಿ, ನಮಗೂ ಬೆಂಗಳೂರಿಗೂ ಇನ್ನೂ ಹತ್ತಿರ ಮಾಡಿದ್ದಾರೆ. ಇವರ ಈ ಕೆಲಸ ಶ್ಲಾಘನೀಯ. ನಮ್ಮ ಭಾಗದ ಜನರೆಲ್ಲ ಈ ಬಸ್‌ನಲ್ಲಿ ಪ್ರಯಾಣಿಸಿ ಉಪಯೋಗ ತೆಗೆದುಕೊಳ್ಳಲಿ ಎಂದರು. ಅಲ್ಲದೇ ನಮ್ಮ ಸಹಕಾರಿ ಸಂಘದಲ್ಲಿ ಈ ಬಸ್ ಸಂಚಾರದ ಟಿಕೇಟ್ ಬುಕಿಂಗ್ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದರು.

ಅಭಿನಂದನೆ ಸ್ವೀಕರಿಸಿದ ವೆಂಕಟ್ರಮಣ ಹೆಗಡೆ ಈ ಭಾಗದ ಜನರ ಸಹಕಾರ ನಮಗೆ ಅಗತ್ಯ ಎಂದರು. ಯುವ ಉದ್ಯಮಿ ಶಶಾಂಕ ವೆಂಕಟ್ರಮಣ ಹೆಗಡೆಯವರನ್ನು ಎನ್.ವಿ.ವೈದ್ಯ ಅಭಿನಂದಿಸಿದರೆ, ವಿ. ಆರ್. ಹೆಗಡೆ ಮತ್ತಿಘಟ್ಟ ಸ್ವಾಗತಿಸಿ ಅಭಿನಂದಿಸಿದರು.

300x250 AD

ಪ್ರಾರಂಭದ ದಿನ ದೇವನಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಿದ ಗುರುದಾಸ್ ದಿವೇಕರ್‌ರವರನ್ನು ಪುಷ್ಪಗುಚ್ಚ ನೀಡಿ ವೆಂಕಟ್ರಮಣ ಹೆಗಡೆಯವರು ಅಭಿನಂದಿಸಿದರು.
ಅದೇ ದಿನ ಅಂಕೋಲಾ ತಾಲೂಕಿನ ಹಿಲ್ಲೂರು, ಚೆನ್ನಗಾರ ಮತ್ತು ಶಿರಸಿ ತಾಲೂಕಿನ ದೇವನಳ್ಳಿ ಹಾಗೂ ಹೆಗಡೆಕಟ್ಟಾದಲ್ಲಿ ಜನರು ಬಸ್ ಸಂಚಾರಕ್ಕೆ, ಬಸ್ಸಿನ ಪೂಜೆ ಮಾಡುವ ಮೂಲಕ ಶುಭಕೋರಿದರು.

Share This
300x250 AD
300x250 AD
300x250 AD
Back to top