Slide
Slide
Slide
previous arrow
next arrow

ಕೆಡಿಸಿಸಿ ಕುಂಬಾರವಾಡ ಶಾಖೆಗೆ ಶಿವರಾಮ‌ ಹೆಬ್ಬಾರ್ ಭೇಟಿ

300x250 AD

ಜೊಯಿಡಾ; ತಾಲೂಕಿನ ಕುಂಬಾರವಾಡದಲ್ಲಿರುವ ಕೆ.ಡಿ.ಸಿ.ಸಿ ಬ್ಯಾಂಕ್ ಶಾಖೆಗೆ ಬ್ಯಾಂಕಿನ‌ ಅಧ್ಯಕ್ಷ ಹಾಗೂ ಯಲ್ಲಾಪುರದ ಶಾಸಕರಾದ ಶಿವರಾಮ ಹೆಬ್ಬಾರ್ ಬುಧವಾರ ಭೇಟಿ ನೀಡಿ ಅನೇಕ ಸಲಹೆ ಸೂಚನೆಗಳನ್ನು ನೀಡಿದರು.

ಬ್ಯಾಂಕಿನಲ್ಲಿ ವ್ಯವಹಾರ ಹೆಚ್ಚಿಸಬೇಕು. ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ‌ ನಮ್ಮ ಬ್ಯಾಂಕ್ ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೆಕು. ಇದು ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಬ್ಯಾಂಕ್ ಸಿಬ್ಬಂದಿಗಳನ್ನು ಉದ್ದೇಶಿಸಿ ಹೇಳಿದರು.

ಇದೇ ಸಂದರ್ಭದಲ್ಲಿ‌ ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾ‌ನಿಸಿದರು. ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣ ದೇಸಾಯಿ, ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್, ಗ್ರಾ.ಪಂ. ಉಪಾಧ್ಯಕ್ಷ ಪ್ರವಿಣ ನಾಯ್ಕ, ಸುರೇಶ್ ಬಂಗಾರೆ, ಶಾಖಾ ವ್ಯವಸ್ಥಾಪಕ ಸಂತೋಷ ಲಾಡ್, ಸಿಬ್ಬಂದಿ ಗಿರೀಶ್ ಡೇರೆಕರ, ಶಿವಾನಂದ, ಅಮಿತ್ ಮೊದಲಾದವರಿದ್ದರು. ಎಸ್.ಬಿ.ಪೈ‌ಅವರು ಸ್ವಾಗತಿಸಿ, ವಂದಿಸಿದರು.

300x250 AD

Share This
300x250 AD
300x250 AD
300x250 AD
Back to top