Slide
Slide
Slide
previous arrow
next arrow

ತುಂಡಾಗಿ ಬಿದ್ದ ಬಸ್ ಆ್ಯಕ್ಸೆಲ್: ಪ್ರಯಾಣಿಕರಿಗೆ ಗಾಯ, ಸಾರ್ವಜನಿಕರ ಆಕ್ರೋಶ

300x250 AD

ಕಾರವಾರ: ಇಲ್ಲಿನ ಹಬ್ಬುವಾಡ ರಸ್ತೆಯಲ್ಲಿ ಕೆ.ಎಸ್.ಆರ್‌.ಟಿ.ಸಿ. ಬಸ್‌ನ ಹಿಂಬದಿಯ ಆ್ಯಕ್ಸೆಲ್ ತುಂಡಾಗಿ ಬಿದ್ದ ಘಟನೆ ನಡೆದಿದೆ.

ಕಾರವಾರದಿಂದ ಕೆರವಡಿ ಗ್ರಾಮಕ್ಕೆ ಸುಮಾರು 50 ಮಂದಿ ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಬಸ್‌ನ ಹಿಂಬದಿಯ ಆಕ್ಸಲ್ ಏಕಾಏಕಿ ತುಂಡಾಗಿ, ಪಲ್ಟಿಯಾಗುವ ಹಂತದಲ್ಲಿದ್ದ ಬಸ್‌ನ್ನು ಸಾರ್ವಜನಿಕರು ಹಿಡಿದು ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

300x250 AD

ಈ ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ಸುಸ್ಥಿತಿಯಲ್ಲಿರದ ಬಸ್‌ನ್ನು ಬಿಟ್ಟ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.

Share This
300x250 AD
300x250 AD
300x250 AD
Back to top