Slide
Slide
Slide
previous arrow
next arrow

ಶ್ರೀರಾಮ‌ ಮಂದಿರ ಮಂತ್ರಾಕ್ಷತೆ ವಿತರಣಾ ಅಭಿಯಾನಕ್ಕೆ ಚಾಲನೆ

300x250 AD

ದಾಂಡೇಲಿ : ಜನವರಿ 22ರಂದು ಅಯೋಧ್ಯೆಯ ಶ್ರೀರಾಮಮಂದಿರ ಲೋಕಾರ್ಪಣೆಯ ಹಿನ್ನಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ ಮಂತ್ರಾಕ್ಷತೆಯನ್ನು ಮತ್ತು ಆಮಂತ್ರಣ ಪತ್ರಿಕೆಯನ್ನು ನಗರದ ಮನೆ ಮನೆಗಳಿಗೆ ವಿತರಿಸುವ ಅಭಿಯಾನಕ್ಕೆ ಭಾನುವಾರ ನಗರದ ಅಂಬೇವಾಡಿಯಲ್ಲಿರುವ ಶ್ರೀನಾಗದೇವತಾ ದೇವಸ್ಥಾನದಲ್ಲಿ ಚಾಲನೆಯನ್ನು‌ ನೀಡಲಾಯಿತು.

ಶ್ರೀನಾಗದೇವತಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚಂದ್ರಕಾಂತ ‌ಕ್ಷೀರಸಾಗರ, ಎಂ.ಎಸ್.ನಾಯ್ಕ, ಎ.ಆರ್.ಪಾಟೀಲ್, ವಿಠ್ಠಲ್ ಬೈಲೂರ್ಕರ್, ವಿನಯ್ ಹುಕ್ಕೇರಿ, ಗೋಪಿ ಸೇಲಾರ್, ಅನ್ನಪೂರ್ಣ ಚೌವ್ಹಾಣ್, ಕವಿತಾ ಪೂಜಾರ, ಗೀತಾ ಕಾಮತ್, ದೀಪಾ, ಗಾಯತ್ರಿ ವಾಡೇಕರ್, ಮೊದಲಾದವರ ತಂಡ‌ ಅಂಬೇವಾಡಿಯಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯೊಂದಿಗೆ ಶ್ರೀರಾಮ ದೇವರ ಭಾವಚಿತ್ರ ಮತ್ತು ಆಮಂತ್ರಣ ಪತ್ರಿಕೆಯನ್ನು‌ ವಿತರಿಸಿದರು.

300x250 AD
Share This
300x250 AD
300x250 AD
300x250 AD
Back to top