Slide
Slide
Slide
previous arrow
next arrow

ಕಲ್ಲೇಶ್ವರದಲ್ಲಿ ಪಿಂಚಣಿ ಕಂದಾಯ ಅದಾಲತ್

300x250 AD

ಅಂಕೋಲಾ: ತಾಲೂಕಿನ ಡೊಂಗ್ರಿ ಪಂಚಾಯತ್ ದ ಕಲ್ಲೇಶ್ವರದಲ್ಲಿ ಪಿಂಚಣಿ ಕಂದಾಯ ಅದಾಲತ್ ನಡೆಯಿತು. ಸಂಧ್ಯಾಸುರಕ್ಷಾ, ವಿಧವಾ ವೇತನ, ವಿಕಲ ಚೇತನ ವೇತನ, ಮನಸ್ವಿನಿ ಯೋಜನೆಯ ಬಗ್ಗೆ ಗ್ರೇಡ್ 2 ತಹಶೀಲ್ದಾರ ಬಿ ಜಿ ಕುಲಕರ್ಣಿ ಮಾಹಿತಿ ನೀಡಿದರು.

ಕಂದಾಯ ಅದಾಲತ್, ಪಹಣಿ ದುರಸ್ತಿ ಬಗ್ಗೆ ಮಾನ್ಯ ತಹಶೀಲ್ದಾರ ರಾದ ಅನಂತ್ ಶಂಕರ್ ಮಾಹಿತಿ ನೀಡಿದರು ಹಾಗೂ ಯೋಜನೆಯ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

300x250 AD

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಡೊಂಗ್ರಿ ಪಂಚಾಯತ ಅಧ್ಯಕ್ಷ ವಿನೋದ ಭಟ್ ನೆರಿವೇರಿಸಿ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅದಾಲತ್ ಯಶಸ್ವಿಯಾಗಲು ಕರೆ ನೀಡಿದರು. ಸಭೆಯಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರರಾದ ಗಿರೀಶ ಜಾಂಬವಳಿಕರ, ಕಂದಾಯ ನಿರೀಕ್ಷಕ ಭಾರ್ಗವ ನಾಯಕ, ಪಿಡಿಓ ಸಿದ್ದಪ್ಪ ತಳವಾರ, ಕಂದಾಯ ಇಲಾಖೆ, ಗ್ರಾ.ಪಂ ಸಿಬ್ಬಂದಿಗಳು ಇದ್ದರು. ಸಂತೋಷ ಪೆಡ್ನೇಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Share This
300x250 AD
300x250 AD
300x250 AD
Back to top