Slide
Slide
Slide
previous arrow
next arrow

ಜೀಪ್ ಡಿಕ್ಕಿ: ಸೈಕಲ್ ಸವಾರ ಸಾವು

300x250 AD

ಅಂಕೋಲಾ: ಇಬ್ಬರು ಪ್ರತ್ಯೇಕವಾದ ಸೈಕ್‍ಲ್ ಮೇಲೆ ಸಂಚರಿಸುತ್ತಿದ್ದ ವೇಳೆ ಜೀಪ್ ಬಡಿದು ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬನು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಅಲಗೇರಿಯ ನಿವಾಸಿ ಮಹಾಬಲೇಶ್ವರ ಕೇಮು ನಾಯ್ಕ (58) ಮೃತಪಟ್ಟ ಸೈಕಲ್ ಸವಾರ.

ಇವರು ಬಾಳೆಗುಳಿಯಲ್ಲಿ ನಡೆಯುವ ಪೈಪ ಕೆಲಸಕ್ಕಾಗಿ ಮಹಾಬಲೇಶ್ವರ ನಾಯ್ಕ ಮತ್ತು ದುಮ್ಮು ಆಯು ಗೌಡ ಸೈಕಲ್ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಹೋಗುತ್ತಿದ್ದ ಜೀಪನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸೈಕಲ್ ಸವಾರರಿಗೆ ಗುದ್ದಿದ ಪರಿಣಾಮವಾಗಿ ಇಬ್ಬರು ಗಾಯಗೊಂಡಿದ್ದರು. ತಲೆಭಾಗಕ್ಕೆ ಗಂಭೀರ ಗಾಯಗೊಂಡ ಮಹಾಬಲೇಶ್ವರ ನಾಯ್ಕನನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು. ಚಿಕಿತ್ಸೆ ಫಲದಾಯಕವಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

300x250 AD

ಈ ಕುರಿತು ಪೀರು ಕೃಷ್ಣಾ ನಾಯ್ಕ ಪೊಲೀಸ ದೂರು ನೀಡಿದ್ದರು. ಪಿಐ ರಮೇಶ ಹೂಗಾರ ಅವರ ನಿರ್ದೇಶನದ ಮೇರೆಗೆ ಎಎಸ್‍ಐ ಲಲಿತಾ ರಜಪೂತ ಅವರು ಜಿಪ್ ಚಾಲಕ ಹೊನ್ನೆಕೇರಿಯ ವಿಷ್ಣು ಹೊನ್ನಪ್ಪ ನಾಯ್ಕ ವಿರುದ್ದ ಪ್ರಕರಣ ದಾಖಲಿಸಿಕೊಂಡು, ಪಿಎಸ್‍ಐ ಸುಹಾಸ್ ಆರ್. ತನಿಖೆ ನಡೆಸಿದರು. ಅಂದು ತಾಲೂಕಿನಲ್ಲಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿರುವುದು ಸ್ಮರಿಸಬಹುದು.

Share This
300x250 AD
300x250 AD
300x250 AD
Back to top