Slide
Slide
Slide
previous arrow
next arrow

ಡಿ.30ಕ್ಕೆ ಶಿರವಾಡದ ಸರಕಾರಿ ಶಾಲೆ ವಾರ್ಷಿಕೋತ್ಸವ

300x250 AD

ಕಾರವಾರ: ತಾಲೂಕಿನ ಶಿರವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಕೆ.ಪಿ.ಎಸ್.)ಯ ಸಮಾರಂಭವು ಡಿ.30 ರಂದು ನಡೆಯಲಿದೆ.

ಅಂದು ಸಂಜೆ 4 ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷರೂ ಆಗಿರುವ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕರಾದ ಸತೀಶ ಸೈಲ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ, ಶಿರವಾಡ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಬಾಂದೇಕರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲತಾ ನಾಯಕ ಪಾಲ್ಗೊಳ್ಳಲಿದ್ದು ಅತಿಥಿಗಳಾಗಿ ಗುತ್ತಿಗೆದಾರರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಆಗಿರುವ ಸಮೀರ ನಾಯ್ಕ ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಕಾಂತ್ ರಾಯ್ಕರ, ಕೆಪಿಎಸ್ ಶಿರವಾಡದ ಪ್ರಾಂಶುಪಾಲರಾದ ಅಂಜಲಿ ಬಾಂದೇಕರ, ಶಿರವಾಡ ಗ್ರಾಪಂ ಉಪಾಧ್ಯಕ್ಷರಾದ ದಿಲೀಪ ನಾಯ್ಕ, ಗ್ರಾಪಂ ಸದಸ್ಯರಾದ ಉಲ್ಲಾಸ ಬಾಂದೇಕರ ಅವರು ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮವ ವೇಳೆ ಬಹುಮಾನ ವಿತರಣೆ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಾಲಾ ಮುಖ್ಯಾಧ್ಯಾಪಕರು, ಸಹ ಶಿಕ್ಷಕರು, ಸಿಆರ್‌ಪಿಗಳು, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸರ್ವ ಸದಸ್ಯರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top