Slide
Slide
Slide
previous arrow
next arrow

ಮುಂಡಗನಮನೆ ಸೊಸೈಟಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೈದ್ಯ ಆಯ್ಕೆ

300x250 AD

ಶಿರಸಿ: ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಇದರ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಸತತ 32ನೇ ವರ್ಷದಲ್ಲಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೆಂ. ವೈದ್ಯ ಹಾಗೂ ಉಪಾಧ್ಯಕ್ಷರಾಗಿ ರಾಘವೇಂದ್ರ ಗ. ಹೆಗಡೆ ಅವಿರೋಧವಾಗಿ ಆಯ್ಕೆಯಾದರು.

ನಂತರ ಗೋಪಾಲಕೃಷ್ಣ ವೆಂ. ವೈದ್ಯ ಮಾತನಾಡಿ, ನಾನು ಈ ಸಂಘದಲ್ಲಿ ಇಲ್ಲಿಯವರೆಗೆ ಸೇವೆ ಗೈಯ್ಯುವ ಅವಕಾಶ ಸಿಕ್ಕಿರುವುದು ಸರ್ವ ಸದಸ್ಯರ ಸಹಕಾರದಿಂದ. ನಿಮ್ಮ ಸಹಕಾರದಿಂದಲೇ ನಾನು ಟಿ.ಎಸ್.ಎಸ್. ಆಡಳಿತ ಮಂಡಳಿಯ ಸದಸ್ಯನಾಗಿ ಹಾಗೆಯೇ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿರುವುದು ಮುಂಡಗನಮನೆ ಸೊಸೈಟಿಯ ಸದಸ್ಯರ ಒತ್ತಾಸೆಯಿಂದ ಎಂದರು. ಹಾಗೆಯೇ ದೀರ್ಘಕಾಲದ ಆಡಳಿತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿ ಈಗ ಯುವ ಸದಸ್ಯರಿಗೆ ಅವಕಾಶ ನೀಡಿ, ನಿವೃತ್ತಿ ಪಡೆದ ಸುಬ್ರಾಯ ವೆಂ ಹೆಗಡೆ ಅಭಿನಂದನೀಯರು ಎಂದರು.

300x250 AD

ಉಪಾಧ್ಯಕ್ಷ ರಾಘವೇಂದ್ರ ಹೆಗಡೆ ಮಾತನಾಡಿ, ನಮ್ಮ ನಿರ್ದೇಶಕ ಮಂಡಳಿಯು ಅವಿರೋಧವಾಗಿ ಸರ್ವ ಸದಸ್ಯರಿಂದ ಆಯ್ಕೆಯಾಗಿದೆ. ಎಲ್ಲಾ ಸದಸ್ಯರು ಗೋಪಾಲಕೃಷ್ಣ ವೈದ್ಯರೇ ಅಧ್ಯಕ್ಷರಾಗಬೇಕೆಂದು ಈ ಹಿಂದೆಯೇ ಒತ್ತಾಸೆ ಮೂಲಕ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಎಲ್ಲಾ ಸದಸ್ಯರ ನಿರ್ದೇಶನದಂತೆಯೇ ಗೋಪಾಲಕೃಷ್ಣ ವೆಂ ವೈದ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದರು. ಅಲ್ಲದೇ ಟಿ.ಎಸ್.ಎಸ್. ಅಧ್ಯಕ್ಷರಾಗಿಯೂ ನಮ್ಮ ಸಂಘದಂತೆ ಉತ್ತಮ ಕೆಲಸವನ್ನು ಮಾಡಿ ನಮ್ಮ ಸಂಘದ ಘನತೆಯನ್ನು ಹೆಚ್ಚಿಸಲಿ ಎಂದರು.
ಮುಖ್ಯಕಾರ್ಯನಿರ್ವಾಹಕ ಶ್ರೀ ನಾಗಪತಿ ಭಟ್ಟ ಇವರು ಸಭೆಗೆ ಸ್ವಾಗತಿಸಿದರು. ಹಾಗೆಯೇ ಚುನಾವಣಾ ಅಧಿಕಾರಿಯಾಗಿ ದಕ್ಷ ಸೇವೆಯನ್ನು ನೀಡಿದ ಶ್ರೀ ಬಿ.ಡಿ. ಡಿಸೋಜಾರವರನ್ನು ಅಭಿನಂದಿಸಲಾಯಿತು.

Share This
300x250 AD
300x250 AD
300x250 AD
Back to top