Slide
Slide
Slide
previous arrow
next arrow

ಟಿಎಂಎಸ್ ವತಿಯಿಂದ ಅದೃಷ್ಟಶಾಲಿ ಗ್ರಾಹಕರ ಆಯ್ಕೆ

300x250 AD

ಯಲ್ಲಾಪುರ: ಪಟ್ಟಣದ ಟಿಎಂಎಸ್ ವತಿಯಿಂದ ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ವಿಶೇಷ ರಿಯಾಯಿತಿ ಮಾರಾಟದ ಅದೃಷ್ಟಶಾಲಿ ಗ್ರಾಹಕರ ಆಯ್ಕೆ ಪ್ರಕ್ರಿಯೆಯನ್ನು ಸೂಪರ್ ಮಾರ್ಕೆಟ್ ಆವಾರದಲ್ಲಿ ನಡೆಸಲಾಯಿತು. ಸಂಸ್ಥೆಯ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸಂಸ್ಥೆಯು ಗ್ರಾಹಕರು, ರೈತರಿಗಾಗಿ ಅನೇಕ ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ. ಬಂದ ಲಾಭಾಂಶದ ಮೂಲಕ ಬೇರೆ ಬೇರೆ ರೀತಿಯಲ್ಲಿ ರೈತರಿಗೆ, ಗ್ರಾಹಕರಿಗೆ ಅನುಕೂಲ ಕಲ್ಪಿಸುತ್ತಿದ್ದೇವೆ. ಎಲ್ಲರ ಶ್ರಮದಿಂದ ಸಂಸ್ಥೆ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ನಿರ್ದೇಶಕರಾದ ಟಿ.ಎನ್.ಭಟ್ಟ ನೆಡಿಗೆಮನೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ಮಂಜುನಾಥ ಹೆಗಡೆ ಕುಂದರಗಿ, ಮಾಜಿ ನಿರ್ದೇಶಕರಾದ ಗಜಾನನ ಗಾಂವ್ಕರ ಬಾರೆ, ಎಂ.ಜಿ.ಭಟ್ಟ ಶೀಗೆಪಾಲ ಇತರರಿದ್ದರು. ನವೆಂಬರ್ 10 ರಿಂದ ಡಿಸೆಂಬರ್ 15 ವರೆಗೆ ನಡೆದ ಅದೃಷ್ಟದ ಕೂಪನ್ ಯೋಜನೆಯಡಿ ಕೂಪನ್ ಎತ್ತುವ ಮೂಲಕ 20 ಅದೃಷ್ಟಶಾಲಿ ಗ್ರಾಹಕರನ್ನು ಆಯ್ಕೆ ಮಾಡಲಾಯಿತು.

300x250 AD
Share This
300x250 AD
300x250 AD
300x250 AD
Back to top