Slide
Slide
Slide
previous arrow
next arrow

ಲಾರಿ ಪಲ್ಟಿ: ಓರ್ವನ ದುರ್ಮರಣ, ಐವರಿಗೆ ಗಾಯ

300x250 AD

ಯಲ್ಲಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒಬ್ಬ ಸ್ಥಳದಲ್ಲೇ ಮೃತಪಟ್ಟು, ಐದು ಜನರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.

ಭಟ್ಕಳ ತಾಲೂಕಿನ ಶಿರಾಲಿಯ ಸಂದೀಪ ತುಳಸಿ ದೇವಾಡಿಗ (37) ಮೃತ ವ್ಯಕ್ತಿ. ಲಾರಿಯಲ್ಲಿದ್ದ ಭಟ್ಕಳದ ಬೈಲೂರಿನ ಭರತ ನಾರಾಯಣ ದೇವಾಡಿಗ, ಶಿರಾಲಿಯ ವೆಂಕಟೇಶ ಮಂಜುನಾಥ ದೇವಾಡಿಗ, ಭಟ್ಕಳ ರಘುನಾಥ ರಸ್ತೆಯ ಅನಂತ ನಾಗಪ್ಪ ದೇವಾಡಿಗ, ಬಾಗಲಕೋಟೆಯ ಇಳಕಲ್ ನ ವಿಶ್ವನಾಥ ಸಂಗಪ್ಪ ಮಡ್ಡಿಕಾರ, ಈರಣ್ಣ ಮಲ್ಲಯ್ಯ ಕೊಣ್ಣೂರು ಗಾಯಗೊಂಡಿದ್ದಾರೆ.

300x250 AD

ಲಾರಿಯಲ್ಲಿ ಗ್ರಾನೈಟ್ ತುಂಬಿಕೊಂಡು ಇಳಕಲ್‌ನಿಂದ ಶಿರಾಲಿ ಕಡೆಗೆ ಹೊರಟಿದ್ದ ವೇಳೆ, ವೇಗದ ಚಾಲನೆಯಿಂದ ಅರಬೈಲ್ ಘಟ್ಟದಲ್ಲಿ ಲಾರಿ ಪಲ್ಟಿಯಾಗಿದೆ. ಸಂದೀಪ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಲಾರಿ ಜಖಂಗೊಂಡಿದ್ದು, ಲಾರಿ ಚಾಲಕ ವಿಶ್ವನಾಥ ಮಡ್ಡಿಕಾರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top