Slide
Slide
Slide
previous arrow
next arrow

ಡಿ.9 ಕ್ಕೆ ‘ಸಂಸ್ಕೃತಿ-ನೆಮ್ಮದಿ’ ಕಾರ್ಯಕ್ರಮ

300x250 AD

ಶಿರಸಿ: ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಡಿ.9 ಕ್ಕೆ ‘ಸಂಸ್ಕೃತಿ-ನೆಮ್ಮದಿ’ ಕಾರ್ಯಕ್ರಮವನ್ನು ನಗರದ ಹೊಟೇಲ್ ಸಾಮ್ರಾಟ್ ಎದುರಿನ ನೆಮ್ಮದಿ ಆವರಣದ ರಂಗಧಾಮದಲ್ಲಿ ಸಂಜೆ 6ರಿಂದ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಹಳ್ಳಿ ವಹಿಸಲಿದ್ದು, ಉದ್ಘಾಟಕರಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಆಗಮಿಸಲಿದ್ದಾರೆ.ಇದೇ ವೇಳೆ ನೂತನ ಯೂಟ್ಯೂಬ್ ಚಾನೆಲ್ ಬಿಡುಗಡೆಗೊಳ್ಳಲಿದ್ದು, ವಿ.ಪಿ.ಹೆಗಡೆ ವೈಶಾಲಿ ನೆರವೇರಿಸಲಿದ್ದಾರೆ.

300x250 AD

ಹಾಗೆಯೇ ವಸಂತ ಹೆಗಡೆ ನಿರ್ದೇಶನದ ‘ಅಷ್ಟಾವಕ್ರ’ ಹಾಗೂ ‘ಟೆಕ್ನೋಲೋಕ’ ಎಂಬ ಎರಡು ನಾಟಕಗಳು ನಡೆಯಲಿದ್ದು, ನಂತರದಲ್ಲಿ ಅನ್ನಪೂರ್ಣ ಹೆಗಡೆ ಗಡಿಗೆಹೊಳೆ ನಿರ್ದೇಶನದ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Share This
300x250 AD
300x250 AD
300x250 AD
Back to top