Slide
Slide
Slide
previous arrow
next arrow

ನಂದೊಳ್ಳಿಯಲ್ಲಿ ‘ಸುಧನ್ವಾರ್ಜುನ’ ಯಕ್ಷಗಾನ ಪ್ರದರ್ಶನ

300x250 AD

ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಪ್ರೌಢಶಾಲೆಯ ರಂಗಮಂದಿರದಲ್ಲಿ ಯಕ್ಷಕಲಾ ಬಳಗ ನಂದೊಳ್ಳಿ ಇವರ ಆಶ್ರಯದಲ್ಲಿ ಪ್ರಸಿದ್ಧ ಕಲಾವಿದರಿಂದ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ಗಣಪತಿ ಭಾಗ್ವತ ಕವಾಳೆ, ಚಂಡೆವಾದಕರಾಗಿ ಪ್ರಸನ್ನ ಭಟ್ಟ ಹೆಗ್ಗಾರ ಭಾಗವಹಿಸಿದ್ದರು. ಅರ್ಜುನನಾಗಿ ಕೊಂಡದಕುಳಿ, ರಾಮಚಂದ್ರ ಹೆಗಡೆ, ಸುಧನ್ವನಾಗಿ ಗಣಪತಿ ಹೆಗಡೆ ತೋಟಿಮನೆ, ಕೃಷ್ಣನಾಗಿ ಮಂಜುನಾಥ ಹೆಗಡೆ ಹಿಲ್ಲೂರು, ಪ್ರಭಾವತಿಯಾಗಿ ದೀಪಕ ಭಟ್ಟ ಕುಂಕಿ, ಪ್ರದ್ಯುಮ್ನನಾಗಿ ಶ್ರೀಧರ ಅಣಲಗಾರ, ವೃಷಕೇತುವಾಗಿ ಶ್ರೀವತ್ಸ ಬಟ್ಲಗುಂಡಿ ಪಾತ್ರ ನಿರ್ವಹಿಸಿದರು. ಸಂಘಟಕ ಎನ್.ಎಸ್.ಭಟ್ಟ ಸ್ವಾಗತಿಸಿ, ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top