Slide
Slide
Slide
previous arrow
next arrow

ರಂಜಿಸಿದ ಸುಧನ್ವ ಮೋಕ್ಷ ತಾಳಮದ್ದಲೆ ಕಾರ್ಯಕ್ರಮ

300x250 AD

ಯಲ್ಲಾಪುರ: ತಾಲೂಕಿನ ಮಾಗೋಡ ಕಾಲೋನಿಯ ವನದುರ್ಗಾ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಕಾರ್ತೀಕ ದೀಪೋತ್ಸವ ನಡೆಯಿತು.

ನಂತರ ಮಾಗೋಡಿನ ಶ್ರೀವಿನಾಯಕ ಯಕ್ಷಮಿತ್ರ ವೃಂದದ ಕಲಾವಿದರಿಂದ ಸುಧನ್ವ ಮೋಕ್ಷ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರ, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ, ಸುಬ್ರಹ್ಮಣ್ಯ ಭಟ್ಟ ಚಂದಗುಳಿ ಭಾಗವಹಿಸಿದ್ದರು.

300x250 AD

ಸುಧನ್ವನಾಗಿ ಮಂಜುನಾಥ ಜೋಶಿ, ಗಣಪತಿ ಭಟ್ಟ ಕೋಲಿಬೇಣ, ಅರ್ಜುನನಾಗಿ ನರಸಿಂಹ ಭಟ್ಟ ಕುಂಕಿಮನೆ, ಕೃಷ್ಣನಾಗಿ ಡಾ.ಶಿವರಾಮ ಭಾಗ್ವತ ಮಣ್ಕುಳಿ, ಹಂಸಧ್ವಜನಾಗಿ ಶ್ರೀಧರ ಅಣಲಗಾರ, ಪ್ರಭಾವತಿಯಾಗಿ ನಾರಾಯಣ ಭಟ್ಟ ಮೊಟ್ಟೆಪಾಲ, ವೃಷಕೇತುವಾಗಿ ವೇದಾ ಭಟ್ಟ ಕಿರಕುಂಭತ್ತಿ ಪಾತ್ರ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗಿಯಾಗಿದ್ದರು.

Share This
300x250 AD
300x250 AD
300x250 AD
Back to top