Slide
Slide
Slide
previous arrow
next arrow

ನಿವೃತ್ತ ಉಪವಲಯ ಅರಣ್ಯಾಧಿಕಾರಿ ನಿಧನ

300x250 AD

ಶಿರಸಿ: ತಾಲೂಕಿನ ತೊಪ್ಪಲಕೇರಿಯ ನಿವೃತ್ತ ಉಪವಲಯ ಅರಣ್ಯಾಧಿಕಾರಿ ಗಣಪತಿ ಜಟ್ಟಪ್ಪ ನಾಯ್ಕ (80) ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ.

ಕೆಲದಿನಗಳ ಅನಾರೋಗ್ಯಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿದ್ದರು. ಮೂಲತಃ ತಾಲೂಕಿನ ಕಡತೋಕಾ ಗ್ರಾಮದ ಅವರು ಜಿಲ್ಲೆಯ ಹಲವು ಕಡೆ ಕಾರ್ಯನಿರ್ವಹಿಸಿದ್ದರು. ಬಾಳೆಗುಳಿ, ಸುಂಕಸಾಳ, ರಾಮನಗುಳಿ, ಸೂಪಾ, ಕೊಡಿಭಾಗ, ರಾಜುಭಾಗ, ಕಾಜುಭಾಗ, ಅಸ್ನೋಟಿ, ಬೇಲಿಕೇರಿ, ಹಟ್ಟಿಕೇರಿ, ಅನಿಲ್ ಗೋಡ, ಚಂದಾವರದಲ್ಲಿ ಸೇವಿ ಸಲ್ಲಿಸಿ ಕೊನೆಗೆ ಮಿರ್ಜಾನದಲ್ಲಿ ನಿವೃತ್ತರಾಗಿದ್ದರು.

300x250 AD

ಪ್ರಾಮಾಣಿಕ ಅನುಭವಿ ಪರಿಣಿತ ಅರಣ್ಯ ಅಧಿಕಾರಿಯಾಗಿ ಹಲವು ಅರಣ್ಯ ಗುನ್ನೆಗಳನ್ನು ಪತ್ತೆ ಮಾಡಿ ಹೆಸರುಗಳಿಸಿದ್ದರು. ಮೃತರು ಪತ್ನಿ, ಮಗ, ಇಬ್ಬರು ಪುತ್ರಿಯರನ್ನು ಹಾಗೂ ಸಹೋದರರನ್ನು ಬಂದು ಬಳಗವನ್ನು ಅಗಲಿದ್ದಾರೆ.

Share This
300x250 AD
300x250 AD
300x250 AD
Back to top