Slide
Slide
Slide
previous arrow
next arrow

ಕಸ್ತೂರಿ ರಂಗನ್ ವಿರೋಧಿಸಿ ಗ್ರಾ.ಪಂ. ಸಭೆಯಲ್ಲಿ ತೀರ್ಮಾನಿಸಲು ಮನವಿ

300x250 AD

ಕುಮಟಾ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಹಳ್ಳಿಗಳನ್ನ ಸೇರಿಸಲು ವಿರೋಧಿಸಿ, ಆಕ್ಷೇಪಣೆಯ ನಿರ್ಣಯವನ್ನ, ಗ್ರಾಮ ಪಂಚಾಯತ ಸಭೆಯಲ್ಲಿ ನಿರ್ಣಯಿಸಲು ಆಗ್ರಹಿಸಿ ಕುಮಟ ತಾಲೂಕಿನ ಅಳಕೋಡ(ಕತಗಾಲ) ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಹೋರಾಟಗಾರರ ವೇದಿಕೆ ನಿಯೋಗದ ಮನವಿ ನೀಡುವ ಕಾರ್ಯಕ್ರಮ ಜರುಗಿದವು.

 ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಕುಮಟಾ ತಾಲೂಕಿನ, 10 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, 42 ಹಳ್ಳಿಗಳನ್ನ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದ್ದು, ಇವುಗಳನ್ನ ಪರಿಸರ ಸೂಕ್ಷ್ಮ ಪ್ರದೇಶದಿಂದ ಮುಕ್ತಗೊಳಿಸಲು ನಿರ್ಣಯಿಸಲು ನಿಯೋಗವು ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಆಗ್ರಹಿಸಿದರು.

 ಹೊನ್ನಾವರ ತಾಲೂಕಿನ ಅಳಕೋಡ(ಕತಗಾಲ) ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ದೇವು ಟಿ ಗೌಡ, ಉಪಾಧ್ಯಕ್ಷರಾದ ಸರೋಜಾ ಭಟ್ಟ, ಸದಸ್ಯರಾದ ಶ್ರೀಧರ ಪೈ, ನಳಿನಿ ನಾಯ್ಕ, ಮಹೇಶ ಭಂಡಾರಿ, ದೀಪಕ್ ನಾಯ್ಕ, ನಯನ ಗೌಡ, ಶಶಿಕಲಾ ಅಂಬಿಗ, ನಿಲಾವತಿ ಮುಕ್ರಿ, ರಾಜು ಭಟ್ಟ, ವಿನಾಯಕ ಅಂಬಿಗ ಉಪಸ್ಥಿತರಿದ್ದರು.

 ಗ್ರಾಮ ಪಂಚಾಯತ ಅಧ್ಯಕ್ಷರಾದ ದೇವು ಗೌಡ ಅವರು ಮಾತನಾಡುತ್ತಾ ಕಸ್ತೂರಿ ರಂಗನ್ ವರದಿಯ ವಿರೋಧ ಜನವಿರೋಧವಾಗಿರುವುದರಿಂದ ಸಾಮೂಹಿಕವಾಗಿ ಕಸ್ತೂರಿ ರಂಗನ್ ವರದಿ ವಿರೋಧಿಸಲು ಅವರು ಹೇಳಿದರು.

 ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ಮಹೇಂದ್ರ ನಾಯ್ಕ ಕತಗಾಲ ಅವರು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ನಿಯೋಗದಲ್ಲಿ ರಾಜು ಮಾಸ್ತಿಹಳ್ಳ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು, ಸೀತಾರಾಮ ನಾಯ್ಕ, ರಾಜೀವ್ ಗೌಡ, ಜಗದೀಶ್ ನಾಯ್ಕ, ಕೃಷ್ಣ ಹೆಗಡೆ, ಪ್ರೇಡ್ಡಿ ಫರ್ನಾಂಡಿಸ್, ಮಹೇಶ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

300x250 AD

ಕುಮಟ ತಾಲೂಕ- 42 ಪರಿಸರ ಸೂಕ್ಷ್ಮ ಹಳ್ಳಿಗಳು:
 ಕುಮಟ ತಾಲೂಕಿನ ಅಳಕೋಡ(ಕತಗಾಲ) ಗ್ರಾಮ ಪಂಚಾಯತದಲ್ಲಿ 12 ಹಳ್ಳಿ, ಸೊಪ್ಪಿನಹೊಸಳ್ಳಿ 9, ಸಂತೆಗುಳಿ 7, ಕಲ್ಲಬ್ಬೆ 3, ಮಿರ್ಜಾನ 5, ಹೊನಲಗದ್ದೆ 1, ದಿವಗಿ 1, ಕೂಜಳ್ಳಿ 1, ಹಿರೇಗುತ್ತಿ 1, ಬಡಾಳ 1 ಹಳ್ಳಿ ಹೀಗೆ ಕುಮಟ ತಾಲೂಕಿನಲ್ಲಿ ಒಟ್ಟು 42 ಹಳ್ಳಿಗಳು ಕರಡು ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top