Slide
Slide
Slide
previous arrow
next arrow

ಮೃತಪಟ್ಟ ಮೀನುಗಾರ ಕುಟುಂಬಕ್ಕೆ ಚೆಕ್ ವಿತರಿಸಿದ ಸಚಿವ ವೈದ್ಯ

300x250 AD

ಭಟ್ಕಳ: ಮೀನುಗಾರಿಕೆಗೆ ತೆರಳಿದ ವೇಳೆ ಸಾವನ್ನಪ್ಪಿದ ತಾಲೂಕಿನ 3 ಮೀನುಗಾರ ಕುಟುಂಬಗಳಿಗೆ ಸಚಿವ ಮಂಕಾಳ ವೈದ್ಯ ತಲಾ 6 ಲಕ್ಷದ  ಪರಿಹಾರದ ಚೆಕ್ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಕಳೆದ ಕೆಲ ದಿನಗಳ ಹಿಂದಷ್ಟೇ ತಾಲೂಕಿನ ಸಣಬಾವಿ ನಿವಾಸಿ ಮಂಜುನಾಥ ಮೊಗೇರ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಸಾವನ್ನಪ್ಪಿದ ಮೀನುಗಾರನ ಮನೆಗೆ ತೆರಳಿ 6 ಲಕ್ಷ ರೂ. ಪರಿಹಾರದ ಚೆಕ್ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅದೇ ರೀತಿ ಇನ್ನು ತಾಲೂಕಿನ  ಇಬ್ಬರು ಮೃತ ಮೀನುಗಾರರ ತಾಯಂದಿರಾದ ಪದ್ಮ ಮಾದೇವ ಮೊಗೇರ, ಹೆರಾಡಿ, ಲಕ್ಷ್ಮಿ ಕುಪ್ಪ ಮೊಗೇರ ಹೊನ್ನೇಗದ್ದೆ ಕುಂಟುಂಬಕ್ಕೆ ಸಚಿವರ ಕಾರ್ಯಾಲಯದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಚೆಕ್ ನೀಡಲಾಯಿತು.

300x250 AD

Share This
300x250 AD
300x250 AD
300x250 AD
Back to top