Slide
Slide
Slide
previous arrow
next arrow

ಬೈಕ್‌ಗೆ ಟ್ಯಾಂಕರ್ ಡಿಕ್ಕಿ; ಈರ್ವರು ಗಂಭೀರ

300x250 AD

ಹೊನ್ನಾವರ: ತಾಲೂಕಿನ ಕಾಸರಕೋಡ್ ಸಮೀಪ ಬೈಕ್‌ಗೆ ಟ್ಯಾಂಕರ್ ಗುದ್ದಿದ ಪರಿಣಾಮ ಈರ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಆರೋಪಿತ ಚಾಲಕ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ತಾನು ಚಾಲಾಯಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ವಾಹನವನ್ನು  ವೇಗವಾಗಿ ಚಲಾಯಿಸಿದ್ದಾನೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದ ಬೈಕ್ ಗೆ ಗುದ್ದಿದ್ದಾನೆ. ಅಪಘಾತದಲ್ಲಿ ಬೈಕ್ ಸವಾರ ಟೊಂಕಾ ಕಾಸರಕೊಡ ನಿವಾಸಿಗಳಾದ ಸೀತಾರಾಮ ಆನಂದ ತಾಂಡೇಲ, ಹಿಂಬದಿ ಸವಾರ  ಗಣಪತಿ ಹನುಮಂತ ಮೇಸ್ತಾ ಅವರು  ಗಂಭೀರ ಗಾಯಗೊಂಡಿದ್ದಾರೆ.

300x250 AD

 ಅಪಘಾತದ ನಂತರ ಆರೋಪಿತನು ತಾನು ಚಲಾಯಿಸುತ್ತಿದ್ದ ಅಪಘಾತಪಡಿಸಿದ ವಾಹನವನ್ನು ಸ್ಥಳದಲ್ಲಿ ನಿಲ್ಲಸದೇ ಭಟ್ಕಳ ಕಡೆಗೆ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾನೆ.  ಅಪಘಾತ ಪಡಿಸಿದ ಗ್ಯಾಸ್ ಟ್ಯಾಂಕರ್  ಚಾಲಕನ ವಿರುದ್ಧ ಕಾಸರಕೋಡ್ ನಿವಾಸಿ ಹರೀಶ ಬಾಬುರಾಯ ತಾಂಡೇಲ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top