Slide
Slide
Slide
previous arrow
next arrow

ಅ.26ಕ್ಕೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ

300x250 AD

ಕಾರವಾರ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರವಾರ ತಾಲೂಕು ಆಟೋರಿಕ್ಷಾ & ಗೂಡ್ಸ್‌ರಿಕ್ಷಾ ಚಾಲಕ – ಮಾಲಕರಿಗೆ ಔತಣಕೂಟ & ಉಚಿತ ಸಮವಸ್ತ್ರ ವಿತರಣೆ ಮತ್ತು ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್ ಹುಡ್ ವಿತರಣೆ ಕಾರ್ಯಕ್ರಮವನ್ನು ಅ.26, ಗುರುವಾರ ಬೆಳಿಗ್ಗೆ 10.30 ಕ್ಕೆ ನಗರದ ಬೀಚ್ ರಸ್ತೆಯ ಆರ್.ಟಿ.ಒ ಆಫೀಸ್ ಎದುರುಗಡೆ, ಅಜ್ವಿ ಓಷನ್’ನಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕ ಸತೀಶ್ ಸೈಲ್ ಆಗಮಿಸಲಿದ್ದು, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಮಾಜಿ ಶಾಸಕಿ ರೂಪಾಲಿ ನಾಯ್ಕ್ ಘನ ಉಪಸ್ಥಿತಿ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಜಾರ್ಜ್ ಸಾಲ್ವದೋ‌ರ್ ಫರ್ನಾಂಡಿಸ್, ಉದ್ಯಮಿ ರಾಜೇಶ್ ಕಾಮತ್, ಉತ್ತರ ಕನ್ನಡ ಮತ್ತು ಹೊನ್ನಾವರ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘ ಅಧ್ಯಕ್ಷ ಶಿವರಾಜ ಮೇಸ್ತ, ಆಟೋ ಚಾಲಕರ ಸಂಘ ಭಟ್ಕಳ ಅಧ್ಯಕ್ಷ ಕೃಷ್ಣ ನಾಯ್ಕ್, ಅಸರಕೇರಿ, ಯಲ್ಲಾಪುರ ಆಟೋ ಚಾಲಕ ಮಾಲಕರ ಸಂಘ ಅಧ್ಯಕ್ಷ ಸಂತೋಷ ನಾಯ್ಕ್ ಆಗಮಿಸಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Share This
300x250 AD
300x250 AD
300x250 AD
Back to top