Slide
Slide
Slide
previous arrow
next arrow

ಚರ್ಮ ರೋಗ ತಜ್ಞ ಕಾಣೆ!

300x250 AD

ಭಟ್ಕಳ: ಕರ್ತವ್ಯಕ್ಕೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಹೋದ ವೈದ್ಯನೋರ್ವ ಮರಳಿ ಮನೆಗೂ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಹಾಲಿ ತಾಲೂಕಿನ ಡಿ.ಪಿ.ಕಾಲೋನಿ ನಿವಾಸಿ, ಮೂಲತಃ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ನಿಟ್ಟೂರು ನಿವಾಸಿ ಡಾ.ಎಚ್.ಟಿ.ಉಮೇಶ ದೇವೇಂದ್ರಪ್ಪ (34) ಕಾಣೆಯಾದವರು. ತಾಲೂಕು ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಅ.10ರ ಬೆಳಿಗ್ಗೆ 9.15ರ ಸುಮಾರಿಗೆ ತನ್ನ ಪತ್ನಿಗೆ ಮನೆಯಿಂದ ಕರ್ತವ್ಯಕ್ಕೆ ಹೋಗುತ್ತೇನೆಂದು ಹೇಳಿ ಕರ್ತವ್ಯದಿಂದ ಮರಳಿ ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ.

300x250 AD

ಸತತ ಮೂರು ದಿನವಾದರು ಬಾರದ ಹಿನ್ನೆಲೆ ನಾಪತ್ತೆಯಾದ ವೈದ್ಯರ ಪತ್ನಿ ಡಾ.ಪೂಜಾ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್‌ಐ ಮಯೂರ ಪಟ್ಟಣ ಶೆಟ್ಟಿ ಪ್ರಕರಣ ತನಿಖೆ ನಡೆಸುತ್ತಿದ್ದು, ವೈದ್ಯನ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ.

Share This
300x250 AD
300x250 AD
300x250 AD
Back to top