Slide
Slide
Slide
previous arrow
next arrow

ಕಳೆದುಕೊಂಡ ಬ್ಯಾಗನ್ನು ಮರಳಿಸಿದ ಸಾರಿಗೆ ಸಿಬ್ಬಂದಿ

300x250 AD

ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸಿಕ್ಕಿದ ಬ್ಯಾಗನ್ನು ವಾರಸುದಾರರಿಗೆ ಮರಳಿಸಿ ಸಾರಿಗೆ ಬಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ಸಿಬ್ಬಂದಿ ಸಂಗಮೇಶ್ ಮುಂಡನವರ, ಶ್ರವಣ್‌ಕುಮಾರ್ ಪರನಾಕರ್ ಅವರಿಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಬ್ಯಾಗ್‌ವೊಂದು ಸಿಕ್ಕಿದ್ದು, ಬ್ಯಾಗಿನಲ್ಲಿ 4050 ರೂ., ಬ್ಯಾಂಕ್ ಪಾಸ್‌ಬುಕ್, ಗ್ಯಾಸ್ ಬುಕ್‌ಗಳಿದ್ದವು. ಬುಕ್‌ಗಳಲ್ಲಿ ಯಶೋಧ ಚೌರಣ್ಣನವರ ಎಂಬುವವರ ಹೆಸರಿತ್ತು.

300x250 AD

ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಸಿಬ್ಬಂದಿ, ಎಎಸ್‌ಐ ಶಬ್ಬೀರ್ ಸಮ್ಮುಖದಲ್ಲಿ ಅದರ ವಾರಸುದಾರರಿಗೆ ಮರಳಿಸಿದ್ದಾರೆ. ಪೋಲಿಸರು ಸಂಗಮೇಶ್ ಮುಂಡನವರ ಹಾಗೂ ಶ್ರವಣ್‌ಕುಮಾರ್ ಪರನಾಕರ್ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top