Slide
Slide
Slide
previous arrow
next arrow

ದಾಂಡೇಲಿ ಕೂಡ ಬರಗಾಲ ಪೀಡಿತ!

300x250 AD

ದಾಂಡೇಲಿ: ರಾಜ್ಯ ಸರ್ಕಾರ ನೂತನವಾಗಿ ಹೊರಡಿಸಿರುವ ಆದೇಶದಲ್ಲಿ  ದಾಂಡೇಲಿಯನ್ನು ಕೂಡ ಸಾಧಾರಣ ಬರಗಾಲ ಪೀಡಿತ ತಾಲ್ಲೂಕನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಶಾಸಕರ ಕಾರ್ಯಾಲಯವು ತಿಳಿಸಿದೆ.

ಈ ಬಾರಿ ಅತ್ಯಧಿಕ ಕಡಿಮೆ ಪ್ರಮಾಣದಲ್ಲಿ ಮಳೆ ಬಂದ ಹಿನ್ನೆಲೆಯಲ್ಲಿ ದಾಂಡೇಲಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಾನಿಯಾಗಿದೆ. ಇವೆಲ್ಲವುಗಳನ್ನು ಗಮನಿಸಿರುವ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಸರಕಾರದ ಗಮನವನ್ನು ಸೆಳೆದಿದ್ದರು.

300x250 AD

ರಾಜ್ಯ ಸರ್ಕಾರ ಘೋಷಣೆ ಮಾಡಿದ ಸಾಧಾರಣ ಬರಗಾಲ ಪೀಡಿತ 21 ತಾಲೂಕುಗಳ ಯಾದಿಯಲ್ಲಿ ದಾಂಡೇಲಿಯನ್ನು ಕೂಡ ಸಾಧಾರಣ ಬರಗಾಲ ಪೀಡಿತ ತಾಲೂಕೆಂದು ಘೋಷಣೆ ಮಾಡಿದೆ ಎಂದು ಶಾಸಕರ ಕಾರ್ಯಾಲಯವ ಪ್ರಕಟಣೆ ತಿಳಿಸಿದೆ.

Share This
300x250 AD
300x250 AD
300x250 AD
Back to top