Slide
Slide
Slide
previous arrow
next arrow

ಕುಸ್ತಿ ಪಂದ್ಯಾವಳಿಯಲ್ಲಿ ಸಾಧನೆ; ಗಂಗಾಧರಗೆ ಸನ್ಮಾನ

300x250 AD

ಮುಂಡಗೋಡ: 2023-24ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿಯಲ್ಲಿ ಸಾಧನೆ ತೋರಿದ ಗಂಗಾಧರ ರಾತೋಡಗೆ ಬಂಜಾರ ಸಮಾಜದಿಂದ ಸನ್ಮಾನಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕುಸ್ತಿ ಸಂಘ, ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬಂಜಾರ ಸಮಾಜದ ಯುವಕ ಗಂಗಾಧರ ಅವರು ಎರಡು ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರು ನಮ್ಮ ಸಮಾಜಕ್ಕೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಬಂಜಾರ ಸಮಾಜದ ಹಿರಿಯ ರಾಮಣ್ಣ ಲಮಾಣಿ ಸನ್ಮಾನಿಸಿ ಶ್ಲಾಘಿಸಿದರು.

300x250 AD

ಈ ಸಂದರ್ಭದಲ್ಲಿ ಸೋಮಶೇಖರ ಲಮಾಣಿ, ಪ್ರಶಾಂತ ಲಮಾಣಿ, ರಮೇಶ ಪವಾರ, ವರಪ್ರಸಾದ, ವೀಣಾ ರಾಠೋಡ, ಪ್ರಕಾಶ ಪವಾರ, ಶಂಕರಪ್ಪ ಲಮಾಣಿ, ಕೃಷ್ಣಾ ರಾಠೋಡ, ನಾರಾಯಣ ರಾಠೋಡ, ಆಶಾ ಪ್ರದೀಪ ಚವಾಣ, ಡಿ.ಟಿ ಲಮಾಣಿ, ಶಂಕರ ಲಮಾಣಿ, ಗೀತಾ ಲಮಾಣಿ, ಶೇಖಪ್ಪ ಲಮಾಣಿ ಹಾಗೂ ರಾಮು ಲಮಾಣಿ ಇದ್ದರು.

Share This
300x250 AD
300x250 AD
300x250 AD
Back to top