Slide
Slide
Slide
previous arrow
next arrow

ಅ.8ಕ್ಕೆ ಪ್ರಬಂಧ ಸ್ಪರ್ಧೆಯ ಪಾರಿತೋಷಕ ವಿತರಣೆ

300x250 AD

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ಅ.8ರಂದು ಸಂಜೆ 4 ಗಂಟೆಗೆ ಪ್ರಬಂಧ ಸ್ಪರ್ಧೆಯ ಪಾರಿತೋಷಕ ವಿತರಣೆ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಭಾರತೀಯತೆ ಎಂಬ ವಿಷಯದ ಕುರಿತು ಡಾ.ಎಸ್.ಆರ್.ಲೀಲಾ ಉಪನ್ಯಾಸ ನೀಡಲಿದ್ದು, ಅತಿಥಿಗಳಾಗಿ ವಿಸ್ತಾರ ಮೀಡಿಯಾದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಆಗಮಿಸುವರು. ಭಾರತೀಯ ಜ್ಞಾನ-ವಿಜ್ಞಾನ ಪರಿಷದ್ ಮೈಸೂರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಸಾತ್ವಿಕ ಫೌಂಡೇಷನ್ ಕಾಗಾರಕೊಡ್ಲು ಇವುಗಳ ಸಹಯೋಗದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಅನುಕ್ರಮ ಸ್ಥಾನ ಗಳಿಸಿದ ಶೈಲೇಶ್ ಆಚಾರ್ಯ ಉಡುಪಿ, ಟಿ.ಎಂ.ಜಗದೀಶ ಕುಪ್ಪಳ್ಳಿ, ಜಿ.ಎಸ್.ಜಯಪ್ರಕಾಶ ತಲವಾಟ, ಪ್ರೋತ್ಸಾಹಕ ಸ್ಥಾನ ಪಡೆದ ಪ್ರದೀಪ ಹೆಗಡೆ ಕೈಗಾ, ಭಾರತಿ ಹೆಗಡೆ ಉಮ್ಮಚಗಿ, ವನಿತಾ ಹೆಗಡೆ ಶಿರಸಿ ಹಾಗೂ ಮೇದಿನಿ ಪತ್ರೇಕರ್ ಹಿತ್ಲಳ್ಳಿ ಇವರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರಕಟಣೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top