Slide
Slide
Slide
previous arrow
next arrow

ಸಚಿವ ಮಂಕಾಳ ವೈದ್ಯರ ನೂತನ ಕಾರ್ಯಾಲಯ ಆರಂಭ

300x250 AD

ಭಟ್ಕಳ: ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಕಾರ್ಯಾಲಯವನ್ನು ಇಲ್ಲಿನ ಅಂಜುಮಾನ್ ಕಾಲೇಜು ರಸ್ತೆಯ ಈ ಹಿಂದಿನ ಸಹಾಯಕ ಆಯುಕ್ತರ ಕಚೇರಿ ಕಟ್ಟಡದಲ್ಲಿ ಆರಂಭಿಸಲಾಯಿತು.

ಕಾರ್ಯಾಲಯ ಉದ್ಘಾಟನೆಗೂ ಪೂರ್ವ ವೇ.ಮೂ. ವಿಶ್ವನಾಥ ಭಟ್ಟ ಅವರ ನೇತೃತ್ವದಲ್ಲಿ ಪೂಜೆ ನೆರವೇರಿಸಿದ ಸಚಿವರು ನಂತರ ಕಚೇರಿಯ ಉದ್ಘಾಟನೆಯನ್ನು ಪುಟಾಣಿಗಳಾದ ಯಶಸ್ವಿ ಆರ್. ಭಟ್ ಹಾಗೂ ರಶ್ಮಿತಾ ಆರ್. ಭಟ್ಟ ಅವರಿಂದ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಸದಾ ಜನರೊಂದಿಗೆ ಇರುವ ಸಚಿವರ ಕಾರ್ಯಾಲಯ ಉದ್ಘಾಟನೆಯಲ್ಲಿ ನೂರಾರು ಜನರು ಸೇರಿದ್ದರಿಂದ ಒಮ್ಮೆಲೆ ಹೆಚ್ಚು ಜನಜಂಗುಳಿ ಎರ್ಪಟ್ಟಿದ್ದು ಸಂಜೆಯ ತನಕವೂ ಕೂಡಾ ಕಚೇರಿಯಲ್ಲಿಯೇ ಇದ್ದು ತಮ್ಮಲ್ಲಿ ಬಂದ ಜನರಿಂದ ಮನವಿಗಳನ್ನು ಸ್ವೀಕರಿಸಿ ಅವರ ಸಂಕಷ್ಟಗಳನ್ನು ಕೇಳಿ ಸ್ಪಂದಿಸುವ ಭರವಸೆಯೊಂದಿಗೆ ಕಳುಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅದರ ಹಿಂದೆ ಯಾರೇ ಇದ್ದರೂ ಸಹ ಜನರಿಗೆ ದೊರೆಯ ಬೇಕಾದ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಲು ಸಾಧ್ಯವಿಲ್ಲ. ಐ.ಆರ್.ಬಿ. ಕಾಮಗಾರಿಯನ್ನು ಮಾಡದೇ ಇರುವುದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಆದರೆ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಹೆದ್ದಾರಿ ಕಾಮಗಾರಿ ಹಾಗೂ ಐ.ಆರ್.ಬಿ. ಕಂಪೆನಿ ಕೇಂದ್ರ ಸಚಿವರದ್ದೆಂದು ತಿಳಿದುಕೊಂಡಿದ್ದೇನೆ. ಆದರೆ ಜನತೆಗೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ರಾಜೀ ಇಲ್ಲ ಜನರಿಗೆ ತೊಂದರೆಯಾಗಬಾರದು ಎನ್ನುವುದು ನಮ್ಮ ಉದ್ದೇಶ. ಕಾರವಾರದ ಸುರಂಗ ಸೋರುತ್ತಿದ್ದು ಅದರ ಸುರಕ್ಷತಾ ಪ್ರಮಾಣ ಪತ್ರವನ್ನು ಕೇಳಿದ್ದೇವೆ. ಆದರೆ ಅದುವೇ ಐ.ಆರ್.ಬಿ.ಯವರಲ್ಲಿ ಇಲ್ಲ ಎನ್ನುವುದು ಇವರ ಕಾರ್ಯವೈಖರಿ ಬಗ್ಗೆ ತೋರಿಸುತ್ತದೆ. ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅನೇಕ ಅಪಘಾತಗಳು ಸಂಭವಿಸಿದೆ, ಅನೇಕ ಸಾವು-ನೋವುಗಳಾಗಿದೆ ಅದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ ಸಚಿವರು ಇಲ್ಲಿಯ ತನಕ ಬಿಜೆಪಿಯವರು ಈ ಬಗ್ಗೆ ಮಾತೇ ಆಡದಿರುವ ಕುರಿತು ಬೇಸರ ವ್ಯಕ್ತಪಡಿಸಿದರು.

300x250 AD

ಕಚೇರಿ ಉದ್ಘಾಟನೆಯ ವೇಳೆ ಮಾತನಾಡಿದ ತಂಝೀಮ್ ಅಧ್ಯಕ್ಷ ಇನಾಯತ್‌ವುಲ್ಲಾ ಶಾಬಂದ್ರಿ ಸಚಿವರ ಕಚೇರಿಯ ಉದ್ಘಾಟನೆಯಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಿದೆ. ಯವುದೇ ಕೆಲಸ ಕಾರ್ಯಗಳಿದ್ದರೂ ಕೂಡಾ ಇಲ್ಲಿಗೆ ಬಂದು ಸಚಿವರ ಆಪ್ತ ಕಾರ್ಯದರ್ಶಿಯವರಿಗೆ ತಿಳಿಸಬಹುದು. ಬೆಂಗಳೂರಿನಲ್ಲಿಯೂ ಕೂಡಾ ಸಚಿವರ ಕಾರ್ಯಾಲಯದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಅಧಿಕಾರಿಗಳಿದ್ದಾರೆ. ಸಚಿವರು ಯಾವುದೇ ಕಾರ್ಯವನ್ನು ಮಾಡಬೇಕು ಅಂದು ಕೊಂಡರೆ ಅದನ್ನು ಮಾಡಿ ಮುಗಿಸುವ ಛಲವನ್ನು ಹೊಂದಿದ್ದು ಜಿಲ್ಲೆಯ ಜನತೆಗೆ ಇನ್ನಷ್ಟು ಸಹಾಯವಾಗಲಿ ಎಂದು ಹಾರೈಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ಸಾಯಿ ಗಾಂವಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಹಿರಿಯ ಮುಖಂಡ ಎಲ್.ಎಸ್.ನಾಯ್ಕ, ತಂಝೀಮ್ ಮಾಜಿ ಅಧ್ಯಕ್ಷ ಎಂ.ಎ.ಮುಝಮ್ಮಿಲ್, ಜಿ.ಪಂ.ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ರಾಮಾ ಮೊಗೇರ, ಗೋಪಾಲ ನಾಯ್ಕ, ಭಾಸ್ಕರ ನಾಯ್ಕ, ವಿಷ್ಣು ದೇವಡಿಗ, ಪುರಸಭಾ ಮಾಜಿ ಅಧ್ಯಕ್ಷ ಪರ್ವೆಜ್ ಕಾಶಿಮಜಿ, ಎಫ್.ಕೆ. ಮೊಗೇರ, ವಿಠಲ ನಾಯ್ಕ, ಆಲ್ಬರ್ಟ ಡಿ ಕೋಸ್ತ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top