Slide
Slide
Slide
previous arrow
next arrow

ಅಂದರ್ ಬಾಹರ್; ನಾಲ್ವರು ವಶಕ್ಕೆ

300x250 AD

ಶಿರಸಿ: ಅಂದರ್ ಬಾಹರ್ ಆಟ ಆಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ, ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಹಾರನಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ತಾಲೂಕಿನ ಕಳವೆ ಸಮೀಪದ ಶೀಗೇಹಳ್ಳಿಯ ಸೀತಾರಾಮ ಗೌಡ, ಸಾಲ್ಕಣಿಯ ನರಸಿಂಹ ಪೂಜಾರಿ, ಶೀಗೇಹಳ್ಳಿಯ ಹನುಮಂತ ಗೌಡ ಹಾಗೂ ಹಿರೇಬೈಲ್ ಸಮೀಪದ ಹೊಣಸಪ್ಪಿಕೊಪ್ಪದ ವಿದ್ಯಾಧರ ಗೌಡ ವಶದಲ್ಲಿರುವವರು.

300x250 AD

ನಾಲ್ವರು ಸೇರಿಕೊಂಡು ತಾಲೂಕಿನ ಹಾರನಳ್ಳಿ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದ ವೇಳೆ ಗ್ರಾಮೀಣ ಠಾಣೆ ತನಿಖಾ ಪಿಎಸ್‌ಐ ದಯಾನಂದ ಜೊಗಳೇಕರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ, 2,500 ರೂ. ನಗದು ಹಾಗೂ ಕಂಬಳಿ ಜಪ್ತಿಪಡಿಸಿಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top