Slide
Slide
Slide
previous arrow
next arrow

ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳು, ಕರು ಇದ್ದಕ್ಕಿದ್ದಂತೆ ಸಾವು

300x250 AD

ಮುಂಡಗೋಡ: ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳು ಹಾಗೂ ಕರು ಇದ್ದಿದ್ದಕ್ಕಿದ್ದಂತೆ ಮೃತಪಟ್ಟಿರುವ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಹುನಗುಂದ ಗ್ರಾಮದ ರೈತ ಬಸವರಾಜ ಛಬ್ಬಿ ಎಂಬುವವರ ಆಕಳು ಮೃತಪಟ್ಟಿದೆ. ಮೃತಪಟ್ಟ ಆಕಳು ಮತ್ತು ಕರು 37 ಸಾವಿರ ರೂ.ಗೆ ಬೆಲೆಬಾಳುವುದೆಂದು ಹೇಳಲಾಗುತ್ತಿದೆ. ಆಕಳು ಮತ್ತು ಕರುವಿಗೆ ದಿನನಿತ್ಯ ಮನೆಯಲ್ಲಿ ಕಟ್ಟಿ ಹಸಿ ಹುಲ್ಲು ನೀಡಲಾಗುತ್ತಿತ್ತು. ಅದೇ ರೀತಿ ಸೋಮವಾರವು ಕರು ಮತ್ತು ಆಕಳಿಗೆ ಮನೆಯಲ್ಲಿ ಕಟ್ಟಿ ಹಸಿ ಹುಲ್ಲು ನೀಡಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ಕರು ಮತ್ತು ಆಕಳು ಇದ್ದಕ್ಕಿದ್ದಂತೆ ಸಾವನಪ್ಪಿದೆ. ಸಾವಿಗೆ ನಿಖರವಾಗಿ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗುತ್ತಿದೆ.

300x250 AD
Share This
300x250 AD
300x250 AD
300x250 AD
Back to top