• Slide
    Slide
    Slide
    previous arrow
    next arrow
  • ಟಿಎಸ್ಎಸ್ ನೂತನ ಮಂಡಳಿಯಿಂದ ಯಲ್ಲಾಪುರ ಶಾಖೆ ಭೇಟಿ

    300x250 AD

    ಯಲ್ಲಾಪುರ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಶಿರಸಿ ಇದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಗೋಪಾಲಕೃಷ್ಣ ವೆಂ. ವೈದ್ಯ ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳು ಇತ್ತೀಚೆಗೆ ಸಂಘದ ಯಲ್ಲಾಪುರ ಶಾಖೆಯನ್ನು ಭೇಟಿ ಮಾಡಿದರು.ಈ ಸಂದರ್ಭದಲ್ಲಿ ಶಾಖೆಯ ಪರವಾಗಿ ಗೌರವಿಸಲಾಯಿತು.

    ಇದೇ ಸಂದರ್ಭದಲ್ಲಿ ಟಿ.ಎಮ್.ಎಸ್ ಯಲ್ಲಾಪುರ, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘ, ಆನಗೋಡ ಸೇವಾ ಸಹಕಾರಿ ಸಂಘ, ಇಡಗುಂದಿ ಸೇವಾ ಸಹಕಾರಿ ಸಂಘ, ವಿಕಾಸ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿ., ಯಲ್ಲಾಪುರ ಹಾಗೂ ಅಡಿಕೆ ವರ್ತಕರ ಸಂಘ (ರಿ), ಯಲ್ಲಾಪುರ ಇವರುಗಳಿಂದಲೂ ಗೌರವಿಸಲಾಯಿತು. ಶಾಖೆಯಲ್ಲಿ ನಡೆಯುವ ಕಾರ್ಯವೈಖರಿಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಈ ಸಂದರ್ಭದಲ್ಲಿ ಟಿ.ಎಸ್.ಎಸ್. ನೂತನ ಆಡಳಿತ ಮಂಡಳಿ ನಿರ್ದೇಶಕರುಗಳು, ಯಲ್ಲಾಪುರ ಶಾಖೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top