ಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ ಹಾಗೂ ಶಿವಾಜಿ ಲಿಯೋ ಕ್ಲಬ್ ಮತ್ತು ನ್ಯೂ ಮಾಡೆಲ್ ಇಂಗ್ಲಿಷ್ ಸ್ಕೂಲ್ ಅಸ್ನೋಟಿ ಸಹಯೋಗದೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ರಾಧೆ- ಕೃಷ್ಣಾ ಸ್ಪರ್ಧೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಅಸ್ನೋಟಿ ವ್ಯವಸ್ಥಾಪಕ ಗೌಡೇಶ ಕೆ.ಟಿ. ಆಗಮಿಸಿ ಶುಭಾಷಯಗಳನ್ನು ಕೋರಿದರು. ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ ಬಿಷ್ಠಣ್ಣನವರ, ಮಕ್ಕಳ ವೇಷಭೂಷಣ ಮನಮೋಹಕವಾಗಿದೆ ಎಂದರು. ಅಧ್ಯಕ್ಷತೆಯನ್ನು ನ್ಯೂ ಮಾಡೆಲ್ ಇಂಗ್ಲಿಷ್ ಸ್ಕೂಲ್ ಮುಖ್ಯಾಧ್ಯಾಪಕ ಶೃತಿಕಾ ದೇಸಾಯಿ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯ ಮೇಲೆ ಶಿಕ್ಷಕರಾದ ವಿಜಯಕುಮಾರ್ ನಾಯ್ಕ, ಸಂತೋಷ್ ಕಾಂಬ್ಳೆ, ರೂಪಾಲಿ ಸಾವಂತ ಉಪಸ್ಥಿತರಿದ್ದರು. ಶಿಕ್ಷಕಿ ಸ್ಮೀತಾ ನಾಯ್ಕ ಸ್ವಾಗತಿಸಿ, ನಿರೂಪಿಸಿದರು.
ಲಯನ್ಸ್- ಲಿಯೋ ಕ್ಲಬ್ಗಳಿಂದ ರಾಧಾ ಕೃಷ್ಣ ಸ್ಪರ್ಧೆ
![](https://euttarakannada.in/wp-content/uploads/2023/09/07kar10-3-730x438.jpg?v=1694173371)