Slide
Slide
Slide
previous arrow
next arrow

ಆ. 26 ಶನಿವಾರದಂದು ಹೆಗಡೆಕಟ್ಟಾ ಸೊಸೈಟಿಯಲ್ಲಿ ಆರೋಗ್ಯ ಜಾಗೃತಿ ಕಾರ್ಯಗಾರ

300x250 AD

ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಅಗಸ್ಟ್ 26 ಶನಿವಾರ ಮಧ್ಯಾಹ್ನ 4:00 ಗಂಟೆಗೆ ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಮತ್ತು ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಜಾಗೃತಿ ಕಾರ್ಯಗಾರ ನಡೆಯಲಿದೆ. 

ಮುಖ್ಯ ಅತಿಥಿಗಳಾಗಿ ಟಿ ಎಸ್ ಎಸ್ ಆಸ್ಪತ್ರೆಯ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಮೇಜರ್ ರಘುನಂದನ ಎಸ್ ಹೆಗಡೆ ಉಪಸ್ಥಿತರಿರಲಿದ್ದಾರೆ.

300x250 AD

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅರುಣ ಶೆಟ್ಟಿ ಓರ್ಥೋ ಪೆಡಿಕ್ಸ್, ಡಾ. ವಿಜಯ ಕುಮಾರ ಜನರಲ್ ಸರ್ಜನ್, ಡಾ. ಸ್ವಾತಿ ವಿನಾಯಕ ಗೈನೊಕಾಲಜಿಸ್ಟ್, ಡಾಕ್ಟರ್ ಆಶಿಶ್ ಜನ್ನು ಪೀಡಿಯಾಟ್ರಿಷಿಯನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ ಹೆಗಡೆ ಕೊಟ್ಟೆಗದ್ದೆ ವಹಿಸಲಿದ್ದು, ಕಾರ್ಯಕ್ರಮದ ಸದುಪಯೋಗವನ್ನು ಸದಸ್ಯರು ಮತ್ತು ಸಾರ್ವಜನಿಕರು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ

Share This
300x250 AD
300x250 AD
300x250 AD
Back to top