Slide
Slide
Slide
previous arrow
next arrow

ಬದಲಾವಣೆಗಾಗಿ ಟಿಎಸ್ಎಸ್ ಚುನಾವಣೆಗೆ ನಿಂತಿದ್ದೇವೆ ; ಗೋಪಾಲಕೃಷ್ಣ ವೈದ್ಯ

300x250 AD

ಶಿರಸಿ: ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿಎಸ್ ಎಸ್ ನ ಹಾಲಿ ಆಡಳಿತ ಮಂಡಳಿಯ ಧೋರಣೆಗಳನ್ನು ಗಮನಿಸಿ, ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ಎಲ್ಲ 15 ನಿರ್ದೇಶಕ ಸ್ಥಾನಗಳಿಗೂ ಸ್ಪರ್ಧೆ ಮಾಡಿದ್ದೇವೆ ಎಂದು ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.

ನಗರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟಿಎಸ್ಎಸ್ ಅಡಕೆ ಬೆಳೆಗಾರರ ಜೀವನಾಡಿ. ಶತಮಾನೋತ್ಸವದ ಅಂಚಿನಲ್ಲಿದೆ. ಆದರೆ, ಅಲ್ಲಿಯ ಆಡಳಿತ ಗಮನಿಸಿದರೆ ಹಾಲಿ ಆಡಳಿತ ಮಂಡಳಿ ವಿರುದ್ಧ ಹೋಗುವಿಕೆ ಅನಿವಾರ್ಯವಾಗಿದೆ ಎಂದರು.

300x250 AD

ಹಾಲಿ ಆಡಳಿತ ಮಂಡಳಿಯ ವಿರುದ್ಧ ಸ್ಪರ್ಧಿಸಿದವರ ಯಾದಿ ಇಂತಿದೆ. ಗೋಪಾಲಕೃಷ್ಣ ವೈದ್ಯ, ಗಣಪತಿ ಜೋಶಿ ಕೊಪ್ಪಲತೋಟ, ದತ್ತಗುರು ಹೆಗಡೆ ಕಡವೆ, ಪುರುಷೋತ್ತಮ ಹೆಗಡೆ ಕಳಲೆಮಕ್ಕಿ, ಮಹಾಬಲೇಶ್ವರ ಭಟ್ ತೋಟಿಮನೆ, ಅಶೋಕ ಹೆಗಡೆ ಬಿಳಗಿ, ವಸಂತ ಹೆಗಡೆ ಸಿರಿಕುಳಿ, ರವೀಂದ್ರ ಹೆಗಡೆ ಹಿರೆಕೈ, ರವೀಂದ್ರ ಹೆಗಡೆ ಹಳದೋಟ, ಸಂತೋಷ ಭಟ್ ಹಳವಳ್ಳಿ, ಕೃಷ್ಣ ಹೆಗಡೆ ಜೂಜಿನಬೈಲ್, ವೀರೇಂದ್ರ ಗೌಡರ್ ತೋಟದಮನೆ, ದೇವೇಂದ್ರ ನಾಯ್ಕ ಕುಪ್ಪಳ್ಳಿ, ನಿರ್ಮಲಾ ಭಟ್ ಅಗಸಾಲಬೊಮ್ನಳ್ಳಿ, ವಸುಮತಿ ಭಟ್ ಕ್ಯಾದಗಿ.

Share This
300x250 AD
300x250 AD
300x250 AD
Back to top