• Slide
    Slide
    Slide
    previous arrow
    next arrow
  • ಶ್ರೀ ವಿನಾಯಕ ಸೌಹಾರ್ದ ವಾರ್ಷಿಕ ಸಭೆ: 47.53 ಲಕ್ಷ ನಿವ್ವಳ ಲಾಭ

    300x250 AD

    ಸಿದ್ದಾಪುರ: ಇಲ್ಲಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀ ವಿನಾಯಕ ಸೌಹಾರ್ದಕ್ರೆಡಿಟ್‌ಕೋ-ಆಪ್ ಲಿ ಇದು 2022-23 ನೇ ಸಾಲಿನಲ್ಲಿ 47.53 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.ವರ್ಷಾಂತ್ಯಕ್ಕೆ 19034 ಸದಸ್ಯರನ್ನು ಹೊಂದಿದ್ದು, ವರದಿ ಸಾಲಿನಲ್ಲಿ 47.66 ಕೋಟಿದುಡಿಯುವ ಬಂಡವಾಳವನ್ನು ಕ್ರೋಢೀಕರಿಸಿಕೊಂಡು ಸಮರ್ಥ ನಿರ್ದೇಶಕ ಮಂಡಳಿ ಮತ್ತು ನಿಷ್ಠಾವಂತ ಸಿಬ್ಬಂದಿಗಳ ಸಹಯೋಗದೊಂದಿಗೆ ಸಂಸ್ಥೆ ಉತ್ತಮ ಸೇವೆ ನೀಡುತ್ತಾ ಬಂದಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಆನಂದ ಈರಾ ನಾಯ್ಕ ಹೊಸೂರು ಹೇಳಿದರು.

    ಅವರು ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಸಹಕಾರಿಯ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಭಟ್ಕಳ, ಹೊನ್ನಾವರ, ಕುಮಟಾಗಳಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರಗಳಲ್ಲಿ ಸಹಕಾರಿಯ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಸಾಲಿನಲ್ಲಿ ಕೂಡಾ ಸದಸ್ಯರ ಶೇರು ಹಣದ ಮೇಲೆ 15% ಡಿವಿಡೆಂಡ್ ಘೋಷಿಸಿದೆ ಎಂದರು.
    ಸಭೆಯಲ್ಲಿ ಬಹುತೇಕ ಅರ್ಹ ಸದಸ್ಯರು ಹಾಜರಿದ್ದು, ಸಭೆಯಲ್ಲಿ ಪರಿಶೋಧಿತ ಲೆಕ್ಕಪತ್ರಗಳು, ಅಂದಾಜುಅಯ-ವ್ಯಯ, ಕಾರ್ಯಯೋಜನೆಗಳು, ಹಾಗೂ ಇನ್ನಿತರ ನಿರ್ಣಯಗಳಿಗೆ ಅನುಮೋದನೆ ಪಡೆಯಲಾಯಿತು. ಹಾಜರಿದ್ದ ಸದಸ್ಯರು ವಿವಿಧ ವಿಷಯಗಳ ಮೇಲೆ ಸಾಕಷ್ಟು ಚರ್ಚೆ ನಡೆಸಿ ಸೂಕ್ತ ಸಮಜಾಯಿಷಿಯನ್ನು ಪಡೆದರು.
    ಸಭೆಯಲ್ಲಿ ಉಪಸ್ಥಿತರಿದ್ದ ಲೆಕ್ಕಪರಿಶೋಧಕರಾದ ಬಿ.ವಿ.ರವೀಂದ್ರನಾಥ ಸಾಗರ ಇವರು ಸಂಸ್ಥೆಯ ಸಾಮರ್ಥ್ಯ, ಪ್ರಗತಿಯ ಲಕ್ಷಣಗಳು ಹಾಗೂ ವ್ಯವಸ್ಥಿತ ನಿರ್ವಹಣೆ ಇವುಗಳ ಬಗ್ಗೆ ಶ್ಲಾಘಿಸಿದರು. ದೇಶದ ಆರ್ಥಿಕತೆಯಂತೆಯೇ ಸಂಸ್ಥೆಯ ಆರ್ಥಿಕತೆ ಕೂಡಾ ಶಿಸ್ತುಬದ್ಧ ನಿರ್ವಹಣೆ ಮತ್ತು ದೂರದೃಷ್ಠಿಯ ಯೋಜನೆಯಿಂದ ಸದೃಢವಾಗುತ್ತದೆ. ಈ ನಿಟ್ಟಿನಲ್ಲಿ ಸಹಕಾರಿಯ ಎಲ್ಲಾ ಸದಸ್ಯರೂ ಸಂಸ್ಥೆಯೊ0ದಿಗೆ ನಿಯಮಿತ ವ್ಯವಹಾರ ನಡೆಸುವುದು ಅಗತ್ಯ ಎಂದರು.

    300x250 AD

    ವೇದಿಕೆಯಲ್ಲಿ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾದ ವಿನಾಯಕ ನಾಯ್ಕ, ನಿರ್ದೇಶಕರುಗಳಾದ ವಿ.ಬಿ.ಶೇಟ್, ಪ್ರೇಮಾನಂದ ಕಾಮತ್, ಪರಮೇಶ್ವರ ನಾಯ್ಕ್, ಸರೋಜಾ ನಾಯ್ಕ, ರಾಘವೇಂದ್ರ ಪೈ,ಮಹಾಬಲೇಶ್ವರ ನಾಯ್ಕ, ಹನುಮಂತಪ್ಪ ವಡ್ಡರ, ಮುಂತಾದವರಿದ್ದರು.
    ಕಾರ್ಯಕ್ರಮವನ್ನು ಪ್ರಧಾನ ವ್ಯವಸ್ಥಾಪಕರಾದ ಶ್ರೀಧರ ಎಂ.ಹೆಗಡೆ ನಿರ್ವಹಿಸಿದರು.ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ ನಾಯ್ಕ, ಶಾಖಾ ವ್ಯವಸ್ಥಾಪಕರುಗಳಾದ ಸಂತೋಷ ನಾಯಕ್, ದೇವರಾಜ ಪೂಜಾರ್, ಶ್ರೀಧರ ನಾಯ್ಕ್, ದರ್ಶನ್ ನಾಯ್ಕ್, ಅಭಿಜಿತ್ ನಾಯ್ಕ್, ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನೇಹಾ ನಾಯಕ್, ದೀಪಾ ದೊಂಡ, ಹಾಗೂ ರಂಜಿತಾ ಇವರ ಪ್ರಾರ್ಥನೆಯೊಂದಿಗೆ ಪ್ರಾಂಭಿಸಲಾಯಿತು. ಅಕೌಂಟ0ಟ್ ಭಾಗೀರಥಿ ಮೇಸ್ತ ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪರಮೇಶ್ವರ ನಾಯ್ಕ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top