Slide
Slide
Slide
previous arrow
next arrow

ಎಂ.ಎಂ. ಮಹಾವಿದ್ಯಾಲಯದಲ್ಲಿ ಗ್ರಂಥಾಪಾಲಕರ ದಿನಾಚರಣೆ

300x250 AD

ಶಿರಸಿ: ಇಲ್ಲಿನ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಜನ್ಮದಿನದ ಪ್ರಯುಕ್ತ “ರಾಷ್ಟ್ರೀಯ ಗ್ರಂಥಪಾಲಕರ ದಿನ”ವನ್ನು ಆಚರಿಸಲಾಯಿತು.

ಈ ವೇಳೆ ಡಾ.ಟಿ.ಎಸ್. ಹಳೆಮನೆ ಮಾತನಾಡಿ, ಮೊಬೈಲ್ ಮುಚ್ಚಿ ಪುಸ್ತಕ ತೆರೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗ್ರಂಥಾಪಾಲಕಿ ಶ್ರೀಮತಿ ಶಾರದಾ ಭಟ್ ರಂಗನಾಥನ್ ಅವರ ಜೀವನ ಮತ್ತು ಸಾಧನೆಗಳ ಪರಿಚಯ ಮಾಡಿಕೊಟ್ಟರು. ಬಿ. ಎ. ಅಂತಿಮ ವರ್ಷದ ಅಣ್ಣಪ್ಪ ಡಿ. ಹಾಗು ಬಿ. ಎಸ್ಸಿ ದ್ವಿತೀಯ ವರ್ಷದ ಸುಮುಖ ಭಟ್ಟ ಇವರಿಗೆ “ಅತ್ಯುತ್ತಮ ಗ್ರಂಥಾಲಯ ಬಳಕೆದಾರರು” ಎಂದು ಕಿರು ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.

300x250 AD

ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗ ಮುಖ್ಯಸ್ಥೆ ಪೋ. ಶೈಲಜಾ ಭಟ್, ಗ್ರಂಥಾಲಯ ಸಿಬ್ಬಂದಿಗಳಾದ ಸುಮನಾ ನಾಯ್ಕ, ಉದಯ ಕಲಾಲ್, ಚೈತ್ರಾ ಬೆಸ್ತರ್, ಸುಮಾ ಮಡಿವಾಳ್ ಹಾಗು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.

Share This
300x250 AD
300x250 AD
300x250 AD
Back to top