• Slide
    Slide
    Slide
    previous arrow
    next arrow
  • TSS ಚುನಾವಣೆ: ಗೋಪಾಲಕೃಷ್ಣ ವೈದ್ಯ ಸೇರಿ ಸಹಕಾರಿ ಸಂಘ ಪ್ರತಿನಿಧಿಗಳಿಂದ ನಾಮಪತ್ರ ಸಲ್ಲಿಕೆ

    300x250 AD

    ಶಿರಸಿ: ಪ್ರತಿಷ್ಠಿತ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ಆಯ್ಕೆಗಾಗಿ ಆ.20ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಚುರುಕುಗೊಂಡಿದೆ.

    ಅಂತೆಯೇ ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ ನೇತೃತ್ವದಲ್ಲಿ ಮುಂಡಗನಮನೆ ಸೇವಾ ಸಹಕಾರಿ ಸಂಘ ಹಾಗೂ ಸೊಂದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ವಿ ಜೋಶಿ, RDC ಸೊಸೈಟಿ ಹುಳಗೋಳ ಅಧ್ಯಕ್ಷ ಡಿ. ಎಸ್ ಹೆಗಡೆ, ಹೀಪನಳ್ಳಿ ಸೇವಾ ಸಹಕಾರಿ ಸಂಘದ ಪ್ರತಿನಿಧಿಗಳಾದ ವೆಂಕಟ್ರಮಣ ಹೆಗಡೆ ಹಾಗೂ ಸಾಲ್ಕಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಹೆಗಡೆ ಸಹಕಾರಿ ಸಂಘಗಳ ಪ್ರತಿನಿಧಿಗಳಾಗಿ ಆ.7, ಸೋಮವಾರದಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

    300x250 AD

    ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಎಂ.ಎನ್. ಭಟ್, ಬಕ್ಕಳ ಸೊಸೈಟಿ ಅಧ್ಯಕ್ಷ ಜಿ.ಎನ್. ಭಟ್, ಹುಲೇಕಲ್ ಸೊಸೈಟಿ ಅಧ್ಯಕ್ಷ ವೀರೇಂದ್ರ ಗೌಡ್ರು ಹಾಗೂ ಇತರ ಸಹಕಾರಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top