Slide
Slide
Slide
previous arrow
next arrow

ಎಡೆಬಿಡದೆ ಸುರಿಯುತ್ತಿರುವ ಮಳೆ: ಆಕಳು ಸಾವು, ಮರ ಬಿದ್ದು ದೇವಸ್ಥಾನ ಸಂಪೂರ್ಣ ಹಾನಿ

300x250 AD

ಯಲ್ಲಾಪುರ: ಕಳೆದ ಮೂವತ್ತಾರು ಗಂಟೆಯಿ0ದ ಯಲ್ಲಾಪುರ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೋಟಗೇರಿ ಕರಿಯಮ್ಮದೇವಿ ದೇವಸ್ಥಾನ ಮೇಲೆ ಮರ ಬಿದ್ದು ದೇವಸ್ಥಾನ ಸಂಪೂರ್ಣ ಹಾನಿಯಾಗಿದೆ. ಸಹಸ್ರಳ್ಳಿ ಬಳಿ ನೀರು ತುಂಬಿದ್ದ ಹೊಂಡದಲ್ಲಿ ಆಕಳೊಂದು ಮುಳುಗಿ ಸಾವನ್ನಪ್ಪಿದ್ದು, ಈ ಆಕಳು ಸಹಸ್ರಳ್ಳಿಯ ವೆಂಕಟ್ರಮಣ ಮಾಬ್ಲೇಶ್ವರ ಭಟ್ಟ ಇವರಿಗೆ ಸೇರಿದ್ದಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮಳೆಗಾಲದಲ್ಲಿ ಇಲ್ಲಿಯವರೆಗೆ 755 ಮಿಲಿಮೀಟರ್ ಮಳೆಯಾಗಿದ್ದು, ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಬೆಳಿಗ್ಗೆಯ 24 ಗಂಟೆಯೊಳಗೆ 140.6 ಮಿಲಿ ಮೀಟರ್ ಭಾರಿ ಮಳೆಯಾಗಿದೆ ಎಂದು ತಹಶೀಲ್ದಾರ ಕಚೇರಿಯ ಮೂಲಗಳು ತಿಳಿಸಿವೆ.

300x250 AD
Share This
300x250 AD
300x250 AD
300x250 AD
Back to top