• Slide
    Slide
    Slide
    previous arrow
    next arrow
  • ಜು.20ಕ್ಕೆ ಶಿಕ್ಷಕರ ನಿಯೋಜನೆಗೆ ಆಗ್ರಹಿಸಿ ಬಿಇಓ ಕಛೇರಿ ಎದುರು ಧರಣಿ

    300x250 AD

    ಅಂಕೋಲಾ: ತಾಲೂಕಿನ ಡೊಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಳವಳ್ಳಿ ಶಾಲೆ ನಂಬರ್ 2ಗೆ ಶಿಕ್ಷಕರ ನಿಯೋಜನೆಗೆ ಆಗ್ರಹಿಸಿ ಜು.20ರಂದು ಮಕ್ಕಳ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಮಾಡಲು ನಿರ್ಣಯಿಸಿದ್ದಾರೆ.
    ಹಳವಳ್ಳಿ ಶಾಲೆ ನಂಬರ್ 2ರ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದ್ದು, ವರ್ಗಾವಣೆ ಮಾಡಿ ತಿಂಗಳೇ ಕಳೆದರೂ ಪರ್ಯಾಯವಾಗಿ ಶಿಕ್ಷಕರ ನೇಮಕವನ್ನು ಮಾಡದೇ ಇರುವುದರಿಂದ ಗ್ರಾಮೀಣ ಭಾಗದ 59 ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಇದರಿಂದ ಬೇಸತ್ತ ಮಕ್ಕಳ ಪಾಲಕರುಗಳು ಪರ್ಯಾಯವಾಗಿ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕು ಅಥವಾ ಅತಿಥಿ ಶಿಕ್ಷಕರನ್ನು ಪಡೆಯುವುದಕ್ಕೆ ವ್ಯವಸ್ಥೆ ಮಾಡಿಸಬೇಕು ಎಂದು ಆಗ್ರಹಿಸಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಎಲ್ಲಾ ಮಕ್ಕಳ ಪಾಲಕರು ಸೇರಿ ಧರಣಿ ಸತ್ಯಾಗ್ರಹಗೆ ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಹಿರಿ- ಕಿರಿಯ ಅಧಿಕಾರಿಗಳಿಗೆ ಅಧಿಕೃತವಾಗಿ ತಿಳಿಸಲಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಗಾಂವ್ಕರ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top