• Slide
    Slide
    Slide
    previous arrow
    next arrow
  • ನಭಕ್ಕೆ ಚಿಮ್ಮಿದ ಚಂದ್ರಯಾನ-3 ನೌಕೆ

    300x250 AD

    ಹೈದರಾಬಾದ್‌: ಇಂದು ಇಡೀ ಜಗತ್ತೇ ಭಾರತದತ್ತ ಬೆರಗು ಕಣ್ಣಿನಿಂದ ನೋಡುತ್ತಿದೆ. ಇದಕ್ಕೆ ಕಾರಣ ನಮ್ಮ ಹೆಮ್ಮೆಯ ಇಸ್ರೋ. ಇಸ್ರೋ ವಿಜ್ಞಾನಿಗಳು ಕೋಟ್ಯಾಂತರ ಭಾರತೀಯರ ಭರವಸೆಯನ್ನು ಹೊತ್ತ ಮಿಷನ್‌ ಚಂದ್ರಯಾನ-3 ನೌಕೆಯನ್ನು ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಚಂದ್ರನೂರಿಗೆ ಚಿಮ್ಮಿಸಿದ್ದಾರೆ.

    ಶ್ರೀಹರಿಕೋಟಾದ ಉಡ್ಡಾಯಣ ಕೇಂದ್ರದಿಂದ ವಿಕ್ರಂ ಹೆಸರಿನ ಲ್ಯಾಂಡರ್ ಮತ್ತು ಪ್ರಜ್ಞಾನ ಹೆಸರಿನ ರೋವರ್ ಹೊತ್ತು ನಭಕ್ಕೆ ಎಲ್‌ವಿಎಂ3-ಎಂ4 ರಾಕೆಟ್ ನ ಬಗ್ಗೆ ಚಿಮ್ಮಿದೆ.ಇದು ಚಂದ್ರನ ಬಳಿಗೆ ಭಾರತದ ಮೂರನೇ ಮಿಷನ್‌ ಆಗಿದೆ. ಮಿಷನ್ ಯಶಸ್ವಿಯಾದರೆ, ಇದು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಅನ್ನು ಸಾಧಿಸಿದ ರಾಷ್ಟ್ರಗಳ ಸಾಲಿಗೆ ಭಾರತವನ್ನು ಸೇರಿಸುತ್ತದೆ. ಆಗಸ್ಟ್ ಅಂತ್ಯದ ವೇಳೆಗೆ ಚಂದ್ರನನ್ನು ಸ್ಪರ್ಶಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top