Slide
Slide
Slide
previous arrow
next arrow

ನಂದಿಗದ್ದಾ ಸಹಕಾರಿ ಸಂಘದ ಚುನಾವಣೆ; ದಾನಗೇರಿ ಬೆಂಬಲಿತ ತಂಡಕ್ಕೆ ಜಯ

300x250 AD

ಜೊಯಿಡಾ: ತಾಲೂಕಿನ ನಂದಿಗದ್ದಾ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ರಾಮಕೃಷ್ಣ ದಾನಗೇರಿ ತಂಡವು ಪ್ರಚಂಡ ಬಹುಮತ ಪಡೆಯುವುದರೊಂದಿಗೆ ಮುಂದಿನ ಐದು ವರ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಶನಿವಾರ ನಡೆದ ಚುನಾವಣೆಯಲ್ಲಿ ಸಹಕಾರಿ ಸಂಘದ 11 ಸ್ಥಾನಗಳ ಪೈಕಿ 10 ಸ್ಥಾನಗಳನ್ನು ರಾಮಕೃಷ್ಣರ ತಂಡ ಪಡೆದು ಪ್ರಚಂಡ ಬಹುಮತ ಸಾಧಿಸಿದರು. ರಾಮಕೃಷ್ಣ ವಿ.ದಾನಗೇರಿ, ಸಂದೇಶ ವಿ.ದೇಸಾಯಿ, ಸುದರ್ಶನ್ ಎಸ್.ಭಾಗ್ವತ್, ಶಶಿಕಾಂತ ಹೆಗಡೆ, ಸುಬ್ರಮಣ್ಯ ಭಾಗ್ವತ್, ರೇಖಾ ಉಪಾಧ್ಯ, ಅರ್ಚನಾ ಹೆಗಡೆ, ವಿನಾಯಕ ಪಟಗಾರ, ಪರಮೇಶ್ವರ ಸಿದ್ದಿ, ರವಿ ರಮೇಶ್ ವೇಳಿಪ್, ಕಾಂಗ್ರೆಸ್ ಬೆಂಬಲಿತ ಅರುಣ ದೇಸಾಯಿ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

300x250 AD

ಚುನಾವಣಾಧಿಕಾರಿಗಳು, ಸೇವಾ ಸಹಕಾರಿ ಸಂಘದ ಸಿಬ್ಬಂದಿ ವರ್ಗದವರು ಅಚ್ಚುಕಟ್ಟಾಗಿ ಚುನಾವಣೆ ನಡೆಸಿಕೊಟ್ಟರು. ಜೊಯಿಡಾ ಪಿಎಸೈ ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಿಸಿದರು. ವಿಜಯೋತ್ಸವ ಸಂದರ್ಭದಲ್ಲಿ ಮಾತನಾಡಿದ ರಾಮಕೃಷ್ಣ ದಾನಗೇರಿ, ಸಂಘದ ಹಿತ ಕಾಪಾಡುವುದೇ ನಮ್ಮ ಉದ್ದೇಶ. ಸರ್ವ ಸದಸ್ಯರಲ್ಲಿ ಸಂಘ ಸಂಘ ಬಿಟ್ಟು ಹೋದವರು ಮತ್ತೆ ಬರಬೇಕೆಂದು ಕರೆ ನೀಡಿದರು.

Share This
300x250 AD
300x250 AD
300x250 AD
Back to top