Slide
Slide
Slide
previous arrow
next arrow

ಗುರು ಪೌರ್ಣಿಮೆ: ಸಾಯಿಮಂದಿರದಲ್ಲಿ ವಿಶೇಷ ಪೂಜೆ

300x250 AD

ಕಾರವಾರ: ಕೋಡಿಭಾಗದ ಸಾಯಿಕಟ್ಟಾದ ಶ್ರೀಸಾಯಿಮಂದಿರದಲ್ಲಿ ಗುರು ಪೌರ್ಣಿಮೆ ಉತ್ಸವದ ಅಂಗವಾಗಿ ವಿಶೇಷ ಪೂಜೆ ಹಾಗೂ ರಾತ್ರಿ ಭಜನೆ ಕಾರ್ಯಕ್ರಮ ಸೋಮವಾರ ನಡೆಯಿತು.

ಮುಂಜಾನೆ ಶ್ರೀ ಸಾಯಿಮಂದಿರದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಪೂಜಾ ಕಾರ್ಯವನ್ನು ಪಾಂಡುರoಗ ಲಕ್ಷ್ಮಣ ಮೇತ್ರಿ, ಕೃಷ್ಣಾನಂದ ಗಂಗಾಧರ ಮೇತ್ರಿ ಹಾಗೂ ಕೇದಾರ ಜಯಾನಂದ ಮೇತ್ರಿ ಅವರು ಶೃದ್ಧಾ ಭಕ್ತಿಯಿಂದ ನೆರವೇರಿಸಿದರು.

300x250 AD

ಬಳಿಕ ಸಂಜೆ 7ರಿಂದ ನಾಮಸಂಕೀರ್ತನೆ ಹಾಗೂ ದಿ.ಶಾಂತಾರಾಮ ಸೈರು ನಾಯ್ಕ ಕುಟುಂಬದವರಿ0ದ ಹಾಗೂ ಶ್ರೀ ಸಾಯಿಕಟ್ಟಾ ಸಾಯಿ ಭಕ್ತ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಮಹಾಮಂಗಳಾರತಿ, ವಿಭೂತಿ, ಪ್ರಸಾದ ವಿತರಣೆ ಮಾಡಲಾಯಿತು.

Share This
300x250 AD
300x250 AD
300x250 AD
Back to top