Slide
Slide
Slide
previous arrow
next arrow

ಮಾನಸಿಕವಾಗಿ ನೊಂದಿದ್ದ ವ್ಯಕ್ತಿ ನೇಣಿಗೆ ಶರಣು: ಪ್ರಕರಣ ದಾಖಲು

300x250 AD

ಅಂಕೋಲಾ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರಸಭೆ ವ್ಯಾಪ್ತಿಯ ಕೋಟೆವಾಡದಲ್ಲಿ ಸಂಭವಿಸಿದೆ. 

ಕೋಟೆವಾಡದ ವಿ.ಟಿ.ರಸ್ತೆ ನಿವಾಸಿ ಗಣಪತಿ ನೂನಾ ನಾಯ್ಕ (75) ಮೃತ ದುರ್ದೈವಿಯಾಗಿದ್ದು, ಈತ ತನ್ನ ಆತ್ಮೀಯ ವಲಯದಲ್ಲಿ ಹುಲಿ ಗಣಪತಿ ಎಂದೇ ಪರಿಚಿತನಾಗಿದ್ದ. ಈತನಿಗೆ  ಕಳೆದ ಆರು ತಿಂಗಳ ಹಿಂದಷ್ಟೇ ಪತ್ನಿ ವಿಯೋಗದಿಂದಾಗಿ ಮತ್ತು ಇಳಿ ವಯಸ್ಸಿನಲ್ಲಿ ಕಾಡುತ್ತಿರುವ ನಾನಾ  ಖಾಯಿಲೆಯಿಂದ ಮಾನಸಿಕವಾಗಿ ನೊಂದು, ಈತ  ಜೂನ್ 20 ರ ಮಂಗಳವಾರ ಮಧ್ಯಾಹ್ನ 3.30 ರಿಂದ ಸಂಜೆ 5.45 ರ ಅವಧಿಯಲ್ಲಿ ಮನೆಯ ಅಡುಗೆ ಕೋಣೆಯಲ್ಲಿ ಮೇಲ್ಛಾವಣಿಯ ಪೈಪಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ

300x250 AD

ಪಿ ಎಸೈ ಉದ್ದಪ್ಪ ಎ.ಡಿ ಮತ್ತು ಪೊಲೀಸ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ತಾಲೂಕಾಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಮತ್ತು ಸ್ಥಳೀಯರು , ಮೃತನ ಮಗ ರಮೇಶ ಹಾಗೂ ಗೆಳೆಯರು ಸಹಕರಿಸಿದರು. ಆತ್ಮಹತ್ಯೆ ಘಟನೆ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top