• Slide
    Slide
    Slide
    previous arrow
    next arrow
  • ಬಸ್ ಬ್ರೇಕ್ ಫೇಲ್, ಟೈರ್ ಬ್ಲಾಸ್ಟ್: ಚಾಲಕ ಸೇರಿ ನಾಲ್ವರಿಗೆ ಗಂಭೀರ ಗಾಯ

    300x250 AD

    ಜೊಯಿಡಾ: ತಾಲೂಕಿನ ಗಣೇಶಗುಡಿ ಬಳಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕೆಎಸ್ಆರ್ಟಿಸಿ ಬಸ್ ಬ್ರೇಕ್ ವೈಫಲ್ಯ ಹಾಗೂ ಟೈರ್ ಬ್ಲಾಸ್ಟ್ ಆಗಿ ಬಸ್ ರಸ್ತೆ ಬದಿಯ ಕಾಲುವೆಗೆ ಇಳಿದಿದ್ದು, ಚಾಲಕ ಸೇರಿ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

    ಬಜಾರಕೋಣಂಗ- ರಾಮನಗರ ಮೂಲಕ ಜೊಯಿಡಾಕ್ಕೆ 54ಮಂದಿ ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ವೇಳೆ ಬ್ರೇಕ್ ಫೇಲ್ ಹಾಗೂ ಟೈರ್ ಬ್ಲಾಸ್ಟ್ ಆಗಿ‌ ಈ ಘಟನೆ ಸಂಭವಿಸಿದ್ದು ಭಾರೀ ಅನಾಹುತ ತಪ್ಪಿದೆ.

    300x250 AD

    ಗಾಯಗೊಂಡವರನ್ನು ಗಣೇಶಗುಡಿ ಕೆಪಿಸಿಸಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ‌ ಎಂದು ತಿಳಿದುಬಂದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top