• Slide
    Slide
    Slide
    previous arrow
    next arrow
  • SSLC ಮರು ಮೌಲ್ಯಮಾಪನ: ಗಣೇಶನಗರ ಸರ್ಕಾರಿ ಪ್ರೌಢಶಾಲೆ 100% ಸಾಧನೆ

    300x250 AD

    ಶಿರಸಿ : ಪ್ರಸಕ್ತ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಗಣೇಶನಗರ ಶಾಲೆಯ ಓರ್ವ ವಿದ್ಯಾರ್ಥಿಯ ರಿಸಲ್ಟ್ ಮರುಮೌಲ್ಯಮಾಪನಕ್ಕೆ ಒಳಪಟ್ಟು ಉತ್ತೀರ್ಣತೆ ಆಗಿರುವುದರಿಂದ ಪರೀಕ್ಷೆಗೆ ಕುಳಿತ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಯ ಫಲಿತಾಂಶ ಶೇ.100ರ ಸಾಧನೆಯೊಂದಿಗೆ ಅತ್ಯಂತ ಹಿಂದುಳಿದ ಭಾಗದಲ್ಲಿ ಈ ಶಾಲೆಯು ಮಹತ್ತರ ಸಾಧನೆ ತೋರಿದಂತಾಗಿದೆ.

    ಅಲ್ಲದೇ ಶಾಲೆಯ ಗುಣಾತ್ಮಕ ಫಲಿತಾಂಶ ಶೇ.85 ರೊಂದಿಗೆ “ಎ” ಶ್ರೇಣಿ ಸಾಧಿಸಿದೆ. ಒಟ್ಟಾರೆಯಾಗಿ 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 03 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದಾರೆ. ಮೇಘನಾ ಗೌಡ 92%, ಶಫಾಬಾನು 89.6%, ಸುಮನಾ ಗೋಸಾವಿ 86% ಸಾಧಿಸಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು, ಅವರ ಏಳ್ಗೆಗೆ ಶ್ರಮಿಸಿದ ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಮತ್ತು ಶಿಕ್ಷಕವೃಂದ ಹಾಗೂ ಸಿಬ್ಬಂದಿಗಳನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪ್ರಕಾಶ ಆಚಾರಿ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top