• Slide
    Slide
    Slide
    previous arrow
    next arrow
  • ‘ಗಣ್ಯರಿಗೆ ಮಾತ್ರ ಸೀಮಿತವಾಗಿದ್ದ ವಾಯುಯಾನ ಮೋದಿ ನಾಯಕತ್ವದಲ್ಲಿ ಪ್ರಜಾಪ್ರಭುತ್ವಗೊಂಡಿದೆ’

    300x250 AD

    ನವದೆಹಲಿ: ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ವಾಯುಯಾನ ಕ್ಷೇತ್ರದ ಬಗ್ಗೆ ಅಪ್ರಬುದ್ಧ ಟೀಕೆಗಳನ್ನು ಮಾಡಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಆರೋಪಿಸಿದ್ದಾರೆ. ಅಲ್ಲದೇ ಈ ಹಿಂದೆ ಗಣ್ಯರಿಗೆ ಮಾತ್ರ ಸೀಮಿತ ಆಗಿದ್ದ ಕ್ಷೇತ್ರವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಿಜವಾಗಿಯೂ ಪ್ರಜಾಪ್ರಭುತ್ವಗೊಂಡಿದೆ ಎಂದು ಹೇಳಿದ್ದಾರೆ.

    ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವರಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ ವೇಣುಗೋಪಾಲ್ ವಿರುದ್ಧ ಟ್ವೀಟ್ ಮಾಡಿರುವ ಸಿಂಧಿಯಾ, “ಮಾಜಿ ನಾಗರಿಕ ವಿಮಾನಯಾನ ರಾಜ್ಯ ಸಚಿವರಾಗಿದ್ದ ಕೆ.ಸಿ. ವೇಣುಗೋಪಾಲ್ ಅವರು ವಾಯುಯಾನ ಕ್ಷೇತ್ರದ ಬಗ್ಗೆ ಇಂತಹ ವಿವೇಚನಾರಹಿತ ಮತ್ತು ಅಪ್ರಬುದ್ಧತೆಯ ಟೀಕೆಗಳನ್ನು ಮಾಡಿರುವುದು ಅತ್ಯಂತ ಆಘಾತಕಾರಿಯಾಗಿದೆ” ಎಂದಿದ್ದಾರೆ.

    ದೆಹಲಿ-ಮುಂಬೈ ನಡುವಿನ ವಿಮಾನ ಟಿಕೆಟ್‌ಗಳ ದುಬಾರಿ ಬೆಲೆಯ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವೇಣುಗೋಪಾಲ್ ವಾಗ್ದಾಳಿ ನಡೆಸಿದ ನಂತರ ಅವರ ಹೇಳಿಕೆಗಳು ಬಂದಿವೆ.

    300x250 AD

    “ಭಾರತದ ಆರ್ಥಿಕತೆಯು ಆರೋಗ್ಯವಾಗಿದೆ. ಜಾಗತಿಕ ಆರ್ಥಿಕತೆಯು ಹೋರಾಟವನ್ನು ಮುಂದುವರೆಸುತ್ತಿದ್ದರೂ ಸಹ, ನಮ್ಮದು 6-6.5 ಶೇಕಡಾ ಬೆಳವಣಿಗೆಯ ದರದೊಂದಿಗೆ ಭರವಸೆಯ ದಾರಿದೀಪವಾಗಿ ನಿಂತಿದೆ. FY 2023-24 ರಲ್ಲಿ, ವಾಯುಯಾನದಂತಹ ಅನಿಯಂತ್ರಿತ ವಲಯವನ್ನು ಸರ್ಕಾರದ ನಿಯಂತ್ರಣದಲ್ಲಿ ಇಡಲು ಯಾವುದೇ ಕಾರಣವಿಲ್ಲ — ಇದರ ಪರಿಣಾಮಗಳು ಹಿಂದೆ ಈ ವಲಯದ ಬೆಳವಣಿಗೆಯ ಸಾಮರ್ಥ್ಯವನ್ನು ಕುಂಠಿತಗೊಳಿಸಿದವು” ಎನ್ನುವ ಮೂಲಕ ಸಿಂಧಿಯಾ ವೇಣುಗೋಪಾಲ್‌ ಅವರಿಗೆ ಟಾಂಗ್‌ ನೀಡಿದ್ದಾರೆ

    “ಈ ಹಿಂದೆ GoFirst ನಿಂದ ಸೇವೆ ಸಲ್ಲಿಸುತ್ತಿದ್ದ ಮಾರ್ಗಗಳ ಒಂದು ಭಾಗವನ್ನು ಈಗಾಗಲೇ ಇತರ ವಿಮಾನಯಾನ ಸಂಸ್ಥೆಗಳಿಗೆ ಹಂಚಲಾಗಿದೆ. ಅಲ್ಲದೆ, 2014 ರಿಂದ ಈ ವಲಯವು ಕಂಡಿರುವ ಅಗಾಧ ಬೆಳವಣಿಗೆಗಳ ಬಗ್ಗೆ ನೀವು ಕಣ್ಣು ಮುಚ್ಚಿರುವಿರಿ. . 2014 ರಲ್ಲಿ ಪ್ರಯಾಣಿಕರ ಸಂಖ್ಯೆ 122 ಮಿಲಿಯನ್ ಇತ್ತು ಪ್ರಸ್ತುತ 280 ಮಿಲಿಯನ್ — ಶೇಕಡಾ 130 ರಷ್ಟು ಜಿಗಿತವಾಗಿದೆ. UDAN ಅಡಿಯಲ್ಲಿ, ನಾವು 475 ಮಾರ್ಗಗಳನ್ನು ಕಾರ್ಯಗತಗೊಳಿಸಿದ್ದೇವೆ ಮತ್ತು 116.06 ಲಕ್ಷ ಪ್ರಯಾಣಿಕರನ್ನು ಹಾರಿಸಿದ್ದೇವೆ” ಎಂದು ಸಿಂಧಿಯಾ ಹೇಳಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top